ಕರ್ನಾಟಕ

karnataka

By

Published : Nov 27, 2019, 10:40 AM IST

ETV Bharat / state

ಉಪಚುನಾವಣೆಯಲ್ಲಿ ಸಂಚಲನ ಸೃಷ್ಟಿಸಿದ ಆ ಆರು ಫೋಟೋಗಳು.. !

ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಹಾಗೂ ಜೆಡಿಎಸ್ ತಾಲೂಕು ಅಧ್ಯಕ್ಷ ಜಾನಕಿ ರಾಮ್ ಮತ್ತು ಜೆಡಿಎಸ್ ಮುಖಂಡ ಮಲ್ಲೇನಹಳ್ಳಿ ಮೋಹನ್ ಭೇಟಿ ಮಾಡಿರುವ ಫೋಟೋಗಳು ಸದ್ಯ ವೈರಲ್​ ಆಗಿವೆ. ಈ ಕುರಿತು ಕ್ಷೇತ್ರದಲ್ಲಿ ಗಹನವಾದ ಚರ್ಚೆ ಕೂಡ ನಡೆಯುತ್ತಿದೆ.

BJP candidate meets JDS Taluk president
ಬಿಜೆಪಿ ಅಭ್ಯರ್ಥಿ ಭೇಟಿ ಮಾಡಿದ ಜೆಡಿಎಸ್ ತಾಲೂಕು ಅಧ್ಯಕ್ಷ

ಮಂಡ್ಯ:ಉಪಚುನಾವಣೆ ಸಂದರ್ಭದಲ್ಲಿ 6 ಫೋಟೋಗಳು ಕ್ಷೇತ್ರದಲ್ಲಿ ಸಂಚಲನ ಮೂಡಿಸಿವೆ. ಆ ಫೋಟೋಗಳು ಜೆಡಿಎಸ್ ವಲಯದಲ್ಲಿ ಗುಸು ಗುಸು ಚರ್ಚೆಗೆ ಕಾರಣವಾದರೆ, ಜೆಡಿಎಸ್ ಅಭ್ಯರ್ಥಿಗೆ ಆತಂಕ ಸೃಷ್ಟಿ ಮಾಡಿವೆ ಎಂದು ಹೇಳಲಾಗ್ತಿದೆ.

ಆ ಆರು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ. ಆ ಫೋಟೋ ಬೇರೆ ಯಾವುದೂ ಅಲ್ಲ, ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಹಾಗೂ ಜೆಡಿಎಸ್ ತಾಲೂಕು ಅಧ್ಯಕ್ಷ ಜಾನಕಿ ರಾಮ್, ಜೆಡಿಎಸ್ ಮುಖಂಡ ಮಲ್ಲೇನಹಳ್ಳಿ ಮೋಹನ್ ಭೇಟಿ ಮಾಡಿರುವ ಫೋಟೋಗಳು.

ಬಿಜೆಪಿ ಅಭ್ಯರ್ಥಿ ಭೇಟಿ ಮಾಡಿದ ಜೆಡಿಎಸ್ ತಾಲೂಕು ಅಧ್ಯಕ್ಷ

ನಾರಾಯಣಗೌಡರನ್ನು ಗೌಪ್ಯ ಸ್ಥಳದಲ್ಲಿ ಈ ಇಬ್ಬರು ನಾಯಕರು ಭೇಟಿ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾತು ಹರಿದಾಡುತ್ತಿವೆ. ಆದರೆ, ಪ್ರಚಾರದ ವೇಳೆ ಅಚಾನಕ್ ಆಗಿ ಸಿಕ್ಕಿ ನಡೆದ ಮಾತುಕತೆ ಎಂದೂ ಹೇಳಲಾಗುತ್ತಿದೆ.

ಒಟ್ಟಿನಲ್ಲಿ ಆ ಆರೂ ಫೋಟೋಗಳು ಉಪಚುನಾವಣೆಯಲ್ಲಿ ಹೊಸ ಚರ್ಚೆಗೆ ಕಾರಣವಾಗಿವೆ. ಸಾಮಾಜಿಕ ಜಾಲತಾಣದಲ್ಲಿ ಇದರ ಬಗ್ಗೆಯೂ ಪರ -ವಿರೋಧದ ಚರ್ಚೆ ನಡೆಯುತ್ತಿದೆ.

ABOUT THE AUTHOR

...view details