ಕರ್ನಾಟಕ

karnataka

By

Published : Apr 2, 2019, 7:28 PM IST

ETV Bharat / state

ಅನಿತಾ ಕುಮಾರಸ್ವಾಮಿಗಾಗಿ ಬೃಹತ್​ ಸೇಬಿನ ಹಾರ:  ಸೇಬಿಗಾಗಿ ಮುಗಿಬಿದ್ದ ಜನ

ಮಂಡ್ಯದಲ್ಲಿ ನಿಖಿಲ್​ ಪರ ಪ್ರಚಾರ ನಡೆಸಿದ ಅನಿತಾ ಕುಮಾರಸ್ವಾಮಿ ಅವರಿಗೆ ಬೃಹತ್ ಸೇಬಿನ ಹಾರ ಅರ್ಪಿಸಲಾಯಿತು

ಮಂಡ್ಯದಲ್ಲಿ ನಿಖಿಲ್​ ಪರ ಅನಿತಾ ಕುಮಾರಸ್ವಾಮಿ ಪ್ರಚಾರ

ಮಂಡ್ಯ:ಪುತ್ರ ನಿಖಿಲ್ ಪರ ಅನಿತಾ ಕುಮಾರಸ್ವಾಮಿ ಅಖಾಡಕ್ಕೆ ಧುಮುಕಿದ್ದು, ನಾಗಮಂಗಲ ಕ್ಷೇತ್ರ ಕೊಪ್ಪ ಜಿಲ್ಲಾ ಪಂಚಾಯಿತಿಯಲ್ಲಿ ಅಬ್ಬರದ ಪ್ರಚಾರ ನಡೆಸಿದರು.

ಮಂಡ್ಯದಲ್ಲಿ ನಿಖಿಲ್​ ಪರ ಅನಿತಾ ಕುಮಾರಸ್ವಾಮಿ ಪ್ರಚಾರ

ಕೊಪ್ಪ ಭಾಗದಲ್ಲಿ ಭರ್ಜರಿ ರೋಡ್ ಶೋ ನಡೆಸಿದ ಅನಿತಾ ಕುಮಾರಸ್ವಾಮಿ, ಪುತ್ರನ ಪರ ಮತಯಾಚನೆ ಮಾಡಿದರು. ಈ ವೇಳೆ, 300 ಕೆ.ಜಿ. ಸೇಬಿನ ಹಾರ ಹಾಕಿ, ಜೆಡಿಎಸ್​ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದರು. ಇನ್ನು ಹಾರದಲ್ಲಿದ್ದ ಸೇಬಿಗಾಗಿ ಜನರು ಮುಗಿಬಿದ್ದ ಘಟನೆಯೂ ನಡೆಯಿತು.

ಕೊಪ್ಪದ ಬಸ್ ನಿಲ್ದಾಣದ ಬಳಿ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಅನಿತಾ ಅವರು ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಶಾಸಕ ಸುರೇಶ್ ಗೌಡ, ಪರಿಷತ್ ಸದಸ್ಯ ಶ್ರೀಕಂಠೇಗೌಡ ಸೇರಿ ಹಲವು ಮುಖಂಡರು ಸಾಥ್ ನೀಡಿದರು.

For All Latest Updates

TAGGED:

ABOUT THE AUTHOR

...view details