ಕರ್ನಾಟಕ

karnataka

ETV Bharat / state

ಮಂಡ್ಯ : ರೋಗಿಯನ್ನು ಕರೆದೊಯ್ಯುತ್ತಿದ್ದ ವೇಳೆ ಚರಂಡಿಗೆ ಸಿಲುಕಿದ ಆ್ಯಂಬುಲೆನ್ಸ್​! - ಮಂಡ್ಯದಲ್ಲಿ ಚರಂಡಿಗೆ ಬಿದ್ದ ಆ್ಯಂಬುಲೆನ್ಸ್

ಚೆನ್ನಪಟ್ಟಣದಿಂದ ಮಂಡ್ಯ ಮೆಡಿಕಲ್ ಕಾಲೇಜಿಗೆ ಜೇನು ಕಡಿತಕ್ಕೊಳಗಾಗಿದ್ದ ರೋಗಿಯನ್ನು ಕೂರಿಸಿಕೊಂಡು ಬರುತ್ತಿದ್ದ ಆ್ಯಂಬುಲೆನ್ಸ್ ಚರಂಡಿಗೆ ಬಿದ್ದು ಸಿಲುಕಿತ್ತು. ಹೀಗಾಗಿ, ರೋಗಿಯನ್ನು ಆಟೋ ಮೂಲಕ ಆಸ್ಪತ್ರೆಗೆ ಸಾಗಿಸಿರುವ ಘಟನೆ ನಡೆದಿದೆ..

ambulance caring a patient gets stuck in drainage at mandya
ಚರಂಡಿಗೆ ಸಿಲುಕಿತು ಆ್ಯಂಬುಲೆನ್ಸ್

By

Published : Jan 9, 2022, 5:10 PM IST

ಮಂಡ್ಯ: ಓವರ್ ಟೇಕ್ ಮಾಡಲು ಹೋಗಿ ಆ್ಯಂಬುಲೆನ್ಸ್ ಚರಂಡಿಗೆ ಸಿಲುಕಿದ ಘಟನೆ ಮದ್ದೂರು ಪಟ್ಟಣದ ಕೆಎಸ್ಆರ್​ಟಿಸಿ ಬಸ್ ನಿಲ್ದಾಣದ ಬಳಿ ಇಂದು ಸಂಭವಿಸಿದೆ.

ಚರಂಡಿಗೆ ಸಿಲುಕಿತು ಆ್ಯಂಬುಲೆನ್ಸ್

ಚೆನ್ನಪಟ್ಟಣದಿಂದ ಮಂಡ್ಯ ಮೆಡಿಕಲ್ ಕಾಲೇಜಿಗೆ ಜೇನು ಕಡಿತಕ್ಕೊಳಗಾಗಿದ್ದ ರೋಗಿಯನ್ನು ಕೂರಿಸಿಕೊಂಡು ಬರುತ್ತಿದ್ದ ಆ್ಯಂಬುಲೆನ್ಸ್ ಚರಂಡಿಗೆ ಬಿದ್ದು ಸಿಲುಕಿದೆ. ಮದ್ದೂರಿನಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಮತ್ತೊಂದು ವಾಹನವನ್ನು ಓವರ್‌ಟೇಕ್ ಮಾಡಲು ಹೋಗಿ ರಸ್ತೆ ಪಕ್ಕದ ಚರಂಡಿಗೆ ಆ್ಯಂಬುಲೆನ್ಸ್ ಸಿಲುಕಿತ್ತು.

ಇದನ್ನೂ ಓದಿ:ಕಾಡಂದಿ ಮಾಂಸ ಬೇಯಿಸುತ್ತಿದ್ದ ವೇಳೆ ಅರಣ್ಯಾಧಿಕಾರಿಗಳ ದಾಳಿ: ಮೂವರ ಬಂಧನ

ನಂತರ ರೋಗಿ ಮತ್ತು ಸಂಬಂಧಿಕರನ್ನು ಆಟೋ ಮೂಲಕ ಮಂಡ್ಯಕ್ಕೆ ಕಳುಹಿಸಲಾಯಿತು. ಸಾರ್ವಜನಿಕರ ಸಹಾಯದಿಂದ ಹರಸಾಹಸಪಟ್ಟು ಆ್ಯಂಬುಲೆನ್ಸ್ ಅನ್ನು ಮೇಲಕ್ಕೆತ್ತಲಾಯಿತು. ಸುಮಾರು 40 ನಿಮಿಷಗಳ ಕಾಲ ಬೆಂಗಳೂರು-ಮೈಸೂರು ಹೈವೇ ಬಂದಾಗಿತ್ತು.

ABOUT THE AUTHOR

...view details