ಮಂಡ್ಯ: ಸುಮಲತಾ ಅಂಬರೀಶ್ಗೆ ಅಭಿಮಾನಿಗಳ ಅಭಿಮಾನ ಹೆಚ್ಚಾಗುತ್ತಿದೆ. ಚುನಾವಣಾ ವೆಚ್ಚಕ್ಕಾಗಿ ಅಭಿಮಾನಿಯೊಬ್ಬ 5 ಸಾವಿರ ರೂಪಾಯಿಗಳನ್ನು ದೇಣಿಗೆ ನೀಡಿದ್ದಾನೆ.
ಮದ್ದೂರು ತಾಲೂಕಿನ ಶಿವಪುರ ಬಳಿ ಅಭಿಮಾನಿಯೊಬ್ಬ ಹಣವನ್ನು ಸುಮಲತಾ ಮಡಿಲಿಗೆ ಹಾಕೋ ಮೂಲಕ ತವರಿನ ಕಾಣಿಕೆ ನೀಡಿದ್ದಾರೆ. ಇಂದು ಮದ್ದೂರು ತಾಲೂಕಿನಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಪ್ರಚಾರದ ಮಧ್ಯೆ ಅಭಿಮಾನಿ ನಂದೀಶ್ ಹಣವನ್ನು ನೀಡಿ ಅಭಿಮಾನ ತೋರಿದ್ದಾನೆ.