ಕರ್ನಾಟಕ

karnataka

ETV Bharat / state

ಸಾಲ ಬಾಧೆ- ಯುವ ರೈತ ಆತ್ಮಹತ್ಯೆ - undefined

ಕೃಷಿಗಾಗಿ ಬ್ಯಾಂಕಿನಲ್ಲಿ 50 ಸಾವಿರ ಕೈ ಸಾಲ ಎಂಬಂತೆ 4 ಲಕ್ಷ ರೂಪಾಯಿ ಸಾಲಮಾಡಿ ಅದನ್ನು ತೀರಿಸಲಾಗದೇ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಯುವ ರೈತ ಆತ್ಮಹತ್ಯೆ

By

Published : May 9, 2019, 3:33 PM IST

ಮಂಡ್ಯ :ಸಾಲಬಾಧೆ ತಾಳಲಾರದೆ ಯುವ ರೈತನೊಬ್ಬ ವಿಷದ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಳವಳ್ಳಿ ತಾಲೂಕಿನ ದೇಶವಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಚನ್ನೇಗೌಡರ ಪುತ್ರ ನಾಗೇಂದ್ರ(25) ಅತ್ಮಹತ್ಯೆ ಮಾಡಿಕೊಂಡ ಯುವ ರೈತನಾಗಿದ್ದು, ತಾಯಿ ಪ್ರೇಮ ಹೆಸರಿನಲ್ಲಿರುವ ಎರಡು ಎಕರೆ ಜಮೀನಿನ ಬೆಳೆಗಾಗಿ ಕಿರುಗಾವಲು ಐಒಬಿ ಬ್ಯಾಂಕಿನಲ್ಲಿ 50 ಸಾವಿರ ಹಾಗೂ ಕೈ ಸಾಲ ಸೇರಿದಂತೆ ಸುಮಾರು 4 ಲಕ್ಷ ರೂಪಾಯಿ ಸಾಲ ಮಾಡಿದ್ದ ಎನ್ನಲಾಗಿದೆ. ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಲಕ್ಕೆ ಕಾರಣವಾಯಿತಾ ಐಪಿಎಲ್ : ಕೃಷಿಯ ಜೊತೆಗೆ ಐಪಿಎಲ್ ಬೆಟ್ಟಿಂಗ್ ಕೂಡ ನಡೆಸುತ್ತಿದ್ದು, ಸಾಲ ಹೆಚ್ಚಾಗಲು ಕಾರಣ ಎಂದು ಹೇಳಲಾಗಿದೆ. ಹೀಗಾಗಿ 4 ಲಕ್ಷ ರೂಪಾಯಿಗೂ ಹೆಚ್ಚು ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ.

For All Latest Updates

TAGGED:

ABOUT THE AUTHOR

...view details