ಕರ್ನಾಟಕ

karnataka

ETV Bharat / state

ವಿಶ್ವ ನೃತ್ಯ ದಿನ: ನೃತ್ಯ ಸಂಯೋಜಕರು,ಪತ್ರಕರ್ತರಿಂದ ಕೊರೊನಾ ಜಾಗೃತಿ ಜಾಥಾ.. - Corona Awareness Jatha

ವಿಶ್ವ ನೃತ್ಯ ದಿನದ ಅಂಗವಾಗಿ ಗಂಗಾವತಿಯಲ್ಲಿ ಕೊರೊನಾ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕಳೆದ ಐದು ವಾರದಿಂದ ಕೊರೊನಾ ವಿರುದ್ಧ ಹಗಲಿರುಳು ಶ್ರಮಿಸುತ್ತಿರುವ ಪೊಲೀಸ್,ಆರೋಗ್ಯ ಸಿಬ್ಬಂದಿಗೆ ಹಾಗೂ ಸೂಕ್ತ ನಿರ್ದೇಶನ ನೀಡಿ ಜವಾಬ್ದಾರಿ ನಿಭಾಯಿಸಿದ ಶಾಸಕ ಪರಣ್ಣ ಮುನವಳ್ಳಿ ಅವರನ್ನ ಸನ್ಮಾನಿಸಿ,ಗೌರವಿಸಲಾಯಿತು.

World Dance Day: Corona Awareness Jatha by choreographers and journalists
ವಿಶ್ವ ನೃತ್ಯ ದಿನ: ನೃತ್ಯ ಸಂಯೋಜಕರು,ಪತ್ರಕರ್ತರಿಂದ ಕೊರೊನಾ ಜಾಗೃತಿ ಜಾಥಾ

By

Published : Apr 29, 2020, 9:55 AM IST

ಕೊಪ್ಪಳ :ವಿಶ್ವ ನೃತ್ಯ ದಿನದ ಅಂಗವಾಗಿ ಗಂಗಾವತಿ ನಗರದ‌ ನೃತ್ಯ ಸಂಯೋಜಕರು,ಪತ್ರಕರ್ತರ ನೇತೃತ್ವದಲ್ಲಿ ನಗರದಲ್ಲಿ ಕೊರೊನಾ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.

ವಿಶ್ವ ನೃತ್ಯ ದಿನ.. ನೃತ್ಯ ಸಂಯೋಜಕರು, ಪತ್ರಕರ್ತರಿಂದ ಕೊರೊನಾ ಜಾಗೃತಿ ಜಾಥಾ..

ಇಲ್ಲಿನ ಕೇಂದ್ರ ಬಸ್ ನಿಲ್ದಾಣದ ಮುಂದೆಯಿರುವ ಕೃಷ್ಣದೇವರಾಯ ವೃತ್ತದಲ್ಲಿ ಜಾಥಾಗೆ ಡಿವೈಎಸ್ಪಿ ಡಾ.ಬಿ ಪಿ ಚಂದ್ರಶೇಖರ ಚಾಲನೆ ನೀಡಿದರು. ಈ ವೇಳೆ ಕಳೆದ ಐದು ವಾರದಿಂದ ಕೊರೊನಾ ವಿರುದ್ಧ ಹಗಲಿರುಳು ಶ್ರಮಿಸುತ್ತಿರುವ ಪೊಲೀಸ್,ಆರೋಗ್ಯ ಸಿಬ್ಬಂದಿ ಹಾಗೂ ಸೂಕ್ತ ನಿರ್ದೇಶನ ನೀಡಿ ಜವಾಬ್ದಾರಿ ನಿಭಾಯಿಸಿದ ಶಾಸಕ ಪರಣ್ಣ ಮುನವಳ್ಳಿ ಅವರನ್ನ ಸನ್ಮಾನಿಸಿ,ಗೌರವಿಸಲಾಯಿತು.

ಈ ವೇಳೆ ಕಾನಿಪ ಸಂಘದ ತಾಲೂಕು ಅಧ್ಯಕ್ಷ ವಿಶ್ವನಾಥ, ನಾಗರಾಜ ಇಂಗಳಗಿ, ನೃತ್ಯ ಸಂಯೋಜಕರಾದ ದೇವರಾಜ, ಮೊಜಸ್ ಪೌಲ್ ಉಪಸ್ಥಿತರಿದ್ದರು.

ABOUT THE AUTHOR

...view details