ಗಂಗಾವತಿ :ಬಿರು ಬೇಸಿಗೆ ಆರಂಭವಾದ ಬಳಿಕ ಕುಡಿಯುವ ನೀರಿನ ಅಭಾವವಾಗುತ್ತಿದೆ. ಇದರಿಂದ ಪಕ್ಷಿಗಳಿಗೆ ತೊಂದರೆಯಾಗದಂತೆ ಲಯನ್ಸ್ ಕ್ಲಬ್ ಆವರಣದಲ್ಲಿ ವಾಯು ವಿಹಾರಕ್ಕೆ ತೆರಳುವ ಯುವಕರು ಬಟ್ಟಲುಗಳಲ್ಲಿ ನೀರು ಮತ್ತು ಆಹಾರ ಧಾನ್ಯಗಳನ್ನು ಇಟ್ಟು ಮಾನವೀಯತೆ ಮೆರೆದಿದ್ದಾರೆ.
ಗಂಗಾವತಿಯಲ್ಲಿ ಪಕ್ಷಿಗಳಿಗಾಗಿ ನೀರು, ಆಹಾರ : ಮರಕ್ಕೆ ಬಟ್ಟಲು ಕಟ್ಟಿ ಯುವಕರಿಂದ ಮಾನವೀಯತೆ - ಗಂಗಾವತಿಯ ಲಯನ್ಸ್ ಕ್ಲಬ್
ಯುವಕರ ಕಾರ್ಯಕ್ಕೆ ಹಿರಿಯ ವೈದ್ಯರಾದ ಡಾ. ಸೋಮರಾಜು, ಡಾ. ಜಿ. ಚಂದ್ರಪ್ಪ ಕೈಜೋಡಿಸಿದ್ದಾರೆ. ಲಯನ್ಸ್ ಕ್ಲಬ್ ಆವರಣದಲ್ಲಿ ನೂರಾರು ಗಿಡಮರಗಳಿಗೆ ನೀರು ಹಾಗೂ ಆಹಾರದ ಬಟ್ಟಲುಗಳನ್ನು ಕಟ್ಟಲಾಗಿದೆ..
![ಗಂಗಾವತಿಯಲ್ಲಿ ಪಕ್ಷಿಗಳಿಗಾಗಿ ನೀರು, ಆಹಾರ : ಮರಕ್ಕೆ ಬಟ್ಟಲು ಕಟ್ಟಿ ಯುವಕರಿಂದ ಮಾನವೀಯತೆ Water and food for birds in gangavathi](https://etvbharatimages.akamaized.net/etvbharat/prod-images/768-512-11195466-thumbnail-3x2-vish.jpg)
ಗಂಗಾವತಿಯಲ್ಲಿ ಪಕ್ಷಿಗಳಿಗಾಗಿ ನೀರು,ಆಹಾರ
ದಾರದ ಸಹಾಯದಿಂದ ಮರ-ಗಿಡಗಳಿಗೆ ಬಟ್ಟಲುಗಳನ್ನು ನೇತು ಹಾಕಿ ಪಕ್ಷಿಗಳ ನೀರಿನ ದಾಹ ತೀರಿಸುವ ಕೆಸಲಕ್ಕೆ ಮುಂದಾಗಿದ್ದಾರೆ. ಯುವಕರ ಕಾರ್ಯಕ್ಕೆ ಹಿರಿಯ ವೈದ್ಯರಾದ ಡಾ. ಸೋಮರಾಜು, ಡಾ. ಜಿ. ಚಂದ್ರಪ್ಪ ಕೈಜೋಡಿಸಿದ್ದಾರೆ. ಲಯನ್ಸ್ ಕ್ಲಬ್ ಆವರಣದಲ್ಲಿ ನೂರಾರು ಗಿಡಮರಗಳಿಗೆ ನೀರು ಹಾಗೂ ಆಹಾರದ ಬಟ್ಟಲುಗಳನ್ನು ಕಟ್ಟಲಾಗಿದೆ.