ಕರ್ನಾಟಕ

karnataka

ETV Bharat / state

ಗಂಗಾವತಿಯಲ್ಲಿ ಪಕ್ಷಿಗಳಿಗಾಗಿ ನೀರು, ಆಹಾರ : ಮರಕ್ಕೆ ಬಟ್ಟಲು ಕಟ್ಟಿ ಯುವಕರಿಂದ ಮಾನವೀಯತೆ - ಗಂಗಾವತಿಯ ಲಯನ್ಸ್ ಕ್ಲಬ್

ಯುವಕರ ಕಾರ್ಯಕ್ಕೆ ಹಿರಿಯ ವೈದ್ಯರಾದ ಡಾ. ಸೋಮರಾಜು, ಡಾ. ಜಿ. ಚಂದ್ರಪ್ಪ ಕೈಜೋಡಿಸಿದ್ದಾರೆ. ಲಯನ್ಸ್ ಕ್ಲಬ್​ ಆವರಣದಲ್ಲಿ ನೂರಾರು ಗಿಡಮರಗಳಿಗೆ ನೀರು ಹಾಗೂ ಆಹಾರದ ಬಟ್ಟಲುಗಳನ್ನು ಕಟ್ಟಲಾಗಿದೆ..

Water and food for birds in gangavathi
ಗಂಗಾವತಿಯಲ್ಲಿ ಪಕ್ಷಿಗಳಿಗಾಗಿ ನೀರು,ಆಹಾರ

By

Published : Mar 28, 2021, 9:55 PM IST

ಗಂಗಾವತಿ :ಬಿರು ಬೇಸಿಗೆ ಆರಂಭವಾದ ಬಳಿಕ ಕುಡಿಯುವ ನೀರಿನ ಅಭಾವವಾಗುತ್ತಿದೆ. ಇದರಿಂದ ಪಕ್ಷಿಗಳಿಗೆ ತೊಂದರೆಯಾಗದಂತೆ ಲಯನ್ಸ್ ಕ್ಲಬ್ ಆವರಣದಲ್ಲಿ ವಾಯು ವಿಹಾರಕ್ಕೆ ತೆರಳುವ ಯುವಕರು ಬಟ್ಟಲುಗಳಲ್ಲಿ ನೀರು ಮತ್ತು ಆಹಾರ ಧಾನ್ಯಗಳನ್ನು ಇಟ್ಟು ಮಾನವೀಯತೆ ಮೆರೆದಿದ್ದಾರೆ.

ದಾರದ ಸಹಾಯದಿಂದ ಮರ-ಗಿಡಗಳಿಗೆ ಬಟ್ಟಲುಗಳನ್ನು ನೇತು ಹಾಕಿ ಪಕ್ಷಿಗಳ ನೀರಿನ ದಾಹ ತೀರಿಸುವ ಕೆಸಲಕ್ಕೆ ಮುಂದಾಗಿದ್ದಾರೆ. ಯುವಕರ ಕಾರ್ಯಕ್ಕೆ ಹಿರಿಯ ವೈದ್ಯರಾದ ಡಾ. ಸೋಮರಾಜು, ಡಾ. ಜಿ. ಚಂದ್ರಪ್ಪ ಕೈಜೋಡಿಸಿದ್ದಾರೆ. ಲಯನ್ಸ್ ಕ್ಲಬ್​ ಆವರಣದಲ್ಲಿ ನೂರಾರು ಗಿಡಮರಗಳಿಗೆ ನೀರು ಹಾಗೂ ಆಹಾರದ ಬಟ್ಟಲುಗಳನ್ನು ಕಟ್ಟಲಾಗಿದೆ.

ABOUT THE AUTHOR

...view details