ಕುಷ್ಟಗಿ/ಕೊಪ್ಪಳ: ಹಿರೇನಂದಿಹಾಳ ಕೆರೆಯಲ್ಲಿ ಮರಳು ದಿಬ್ಬ ಕುಸಿದು ಕೂಲಿ ಕಾರ್ಮಿಕನೋರ್ವ ಮೃತಪಟ್ಟಿದ್ದಾನೆ.
ಹಿರೇನಂದಿಹಾಳ ಗ್ರಾಮದ ಮಹಾದೇವಪ್ಪ ಸಕ್ರಪ್ಪ ಬುರುಡಿ (45) ಮೃತ ಕೂಲಿ ಕಾರ್ಮಿಕ. ಕೂಲಿ ಕಾರ್ಮಿಕ ಮಹಾದೇವಪ್ಪ ಬುರುಡಿಯನ್ನು ಗ್ರಾಮದ ಮರಳು ಸಾಗಾಣಿಕೆದಾರ ನಾಗಪ್ಪ ಹಿರೇಮನಿ ಎಂಬುವರು ಮರಳು ತುಂಬುವ ಕೆಲಸಕ್ಕೆ ಕರೆದೊಯ್ದಿದ್ದರು ಎನ್ನಲಾಗಿದೆ. ಮರಳು ತುಂಬುವಾಗ ಮರಳು ದಿಬ್ಬ ಕುಸಿದು ಸ್ಥಳದಲ್ಲೇ ಕಾರ್ಮಿಕ ಮೃತಪಟ್ಟಿದ್ದಾನೆ. ಘಟನೆ ನಡೆಯುತ್ತಿದ್ದಂತೆ ಟ್ರ್ಯಾಕ್ಟರ್ ಚಾಲಕ ಹಾಗೂ ಇತರ ಕೂಲಿಕಾರರು ಸ್ಥಳದಿಂದ ಕಲ್ಕಿತ್ತಿದ್ದಾರೆ.