ಗಂಗಾವತಿ: ಅಸಂಖ್ಯಾತ ಭಕ್ತರನ್ನು ಹೊಂದಿರುವ ಪ್ರಮುಖ ಧಾಮ ಹಾಗೂ ಹನುಮನ ಜನ್ಮ ಸ್ಥಳ ಎಂದು ಪುರಾಣಗಳಲ್ಲಿ ಉಲ್ಲೇಖವಾಗಿರುವ ಅಂಜನಾದ್ರಿಯ ವಿವಾದ ಮುಗಿದ ಅಧ್ಯಾಯ ಎಂದು ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಸ್ಪಷ್ಟಪಡಿಸಿದ್ದಾರೆ.
ನಗರಕ್ಕೆ ಭೇಟಿ ನೀಡಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಂಧ್ರಪ್ರದೇಶದ ಟಿಟಿಡಿ ಹುಟ್ಟುಹಾಕಿದ್ದ ಅಂಜನಾದ್ರಿ ವಿವಾದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಅಲ್ಲದೇ ಅದು ಅಗತ್ಯವೂ ಇರಲಿಲ್ಲ. ಹನುಮ ಹುಟ್ಟಿದ್ದು ಹಂಪೆಯ ಕಿಷ್ಕಿಂಧೆಯಲ್ಲಿ ಎಂಬುವುದು ಸತ್ಯ. ಹೀಗಾಗಿ ಮತ್ತೆ ಅದನ್ನು ಮುನ್ನೆಲ್ಲೆಗೆ ತರುವ ಅಗತ್ಯವಿಲ್ಲ ಎಂದರು.