ಕರ್ನಾಟಕ

karnataka

ETV Bharat / state

ಶ್ರಮ ಚೇತನ ಪ್ರಶಸ್ತಿಗೆ ಭಾಜನಾರದ ಗಂಗಾವತಿಯ ಮಂಗಳಮುಖಿಯರು - ಈಟಿವಿ ಭಾರತ ಕನ್ನಡ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆ ನೀಡುವ ರಾಜ್ಯಮಟ್ಟದ ಶ್ರಮ ಚೇತನ ಪ್ರಶಸ್ತಿಯನ್ನು ಗಂಗಾವತಿಯ ಮಂಗಳಮುಖಿಯರಿಬ್ಬರು ಪಡೆದುಕೊಂಡಿದ್ದಾರೆ.

kn_GVT_
ಶ್ರಮ ಚೇತನ ಪ್ರಶಸ್ತಿ ಪಡೆದ ಮಂಗಳಮುಖಿಯರು

By

Published : Nov 29, 2022, 8:38 PM IST

ಗಂಗಾವತಿ:ಲಿಂಗತ್ವ ಸಮಸ್ಯೆ ಕೊರತೆಯನ್ನು ಮೆಟ್ಟಿನಿಂತು ಸ್ವಾವಲಂಬಿ ಜೀವನದ ಮೂಲಕ ಬದುಕು ರೂಪಿಸಿಕೊಂಡು ತಮ್ಮದೇ ಸಮುದಾಯದ ಇತರಿಗೆ ಮಾದರಿಯಾದ ಗಂಗಾವತಿ ತಾಲೂಕಿನ ಬಸವಪಟ್ಟಣದ ಇಬ್ಬರು ಮಂಗಳಮುಖಿಯರು ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಮೂಲಕ ಮಂಗಳಮುಖಿಯರಿಬ್ಬರು ರಾಜ್ಯದ ತಮ್ಮ ಸಮುದಾಯಕ್ಕೆ ಮಾದರಿಯಾಗಿದ್ದಾರೆ.

ನರೇಗಾ ಯೋಜನೆಯಡಿ ಕೆಲಸ ಪಡೆದು ಸ್ವಾವಲಂಬಿ ಜೀವನ ರೂಪಿಸಿಕೊಂಡವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆ ನೀಡುವ ರಾಜ್ಯಮಟ್ಟದ ಶ್ರಮ ಚೇತನ ಪ್ರಶಸ್ತಿಯನ್ನು ಬಸವಪಟ್ಟಣದ ಶರಣಮ್ಮ ಮತ್ತು ಹುಲಿಗೆಮ್ಮ ಎಂಬ ಮಂಗಳಮುಖಿಯರಿಗೆ ನೀಡಲಾಗಿದೆ.

ಶ್ರಮ ಚೇತನ ಪ್ರಶಸ್ತಿ ಪಡೆದ ಮಂಗಳಮುಖಿ

ಬಾಗಲಕೋಟೆಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ರಾಜ್ಯಮಟ್ಟದ ಲಿಂಗತ್ವ ಅಲ್ಪಸಂಖ್ಯಾತರ ಶ್ರಮ ಚೇತನ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಉಮಾ ಮಹಾದೇವನ್, ಆಯುಕ್ತೆ ಶಿಲ್ಪಾನಾಗ್ ಪ್ರಶಸ್ತಿ ನೀಡಿ ಸನ್ಮಾನಿಸಿದರು.

ನರೇಗಾ ಹಬ್ಬದಲ್ಲಿ ರಾಜ್ಯ ಪ್ರಶಸ್ತಿ ಪಡೆದ ಬಸವಪಟ್ಟಣ ಗ್ರಾಮ ಪಂಚಾಯಿತಿಯಲ್ಲಿ ಕಾಯಕ ಬಂಧುವಾಗಿರುವ ಶರಣಮ್ಮ ಮತ್ತು ಬಿಕ್ಷಾಟನೆ ಬಿಟ್ಟು ಸ್ವಾವಲಂಬಿ ಜೀವನ ರೂಪಿಸಿಕೊಂಡ ಹುಲಿಗೆಮ್ಮ ಮಂಗಳಮುಖಿಯರಿಗೆ ಮಾದರಿಯಾಗಿದ್ದಾರೆ. ನರೇಗಾದಡಿ 5 ವರ್ಷದಿಂದ ಸಕ್ರಿಯವಾಗಿ ಭಾಗವಹಿಸಿ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದರಿಂದ ಇಂದು ಪ್ರಶಸ್ತಿ ಲಭಿಸಿದೆ.

ಶ್ರಮ ಚೇತನ ಪ್ರಶಸ್ತಿ

ನನ್ನಂತೆ ನಮ್ಮ ಸಮುದಾಯದವರು ಪ್ರತಿಯೊಬ್ಬರೂ ಯೋಜನೆ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಂಗಳಮುಖಿ ಶರಣಮ್ಮ ಹೇಳಿದರು. ನರೇಗಾದಡಿ 5 ವರ್ಷದಿಂದ ಸಕ್ರಿಯವಾಗಿ ಭಾಗವಹಿಸಿ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದರಿಂದ ಪ್ರಶಸ್ತಿ ಲಭಿಸಿದೆ ಎಂದು ಶರಣಮ್ಮ ಹೇಳಿದರು.

ಇದನ್ನೂ ಓದಿ:ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಪೊಲೀಸ್ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಮಂಗಳಮುಖಿ..!

ABOUT THE AUTHOR

...view details