ಕೊಪ್ಪಳ: ಜಿಲ್ಲೆಯಲ್ಲಿ ಪ್ರತ್ಯೇಕ ಎರಡು ದೇವಸ್ಥಾನಗಳಲ್ಲಿ ಹುಂಡಿಗಳ ಕಳ್ಳತನ ನಡೆದಿದೆ. ಜಿಲ್ಲೆಯ ಗಂಗಾವತಿ ಹಾಗೂ ಕಾರಟಗಿ ತಾಲೂಕಿನ ತಲಾ ಒಂದು ದೇವಸ್ಥಾನದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿ ಹುಂಡಿ ಹೊತ್ತೊಯ್ದಿದ್ದಾರೆ.
ಕೊಪ್ಪಳ: ಎರಡು ದೇವಸ್ಥಾನಗಳಲ್ಲಿ ಹುಂಡಿ ಕಳ್ಳತನ - theft of temples hundi news
ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಗುಂಡೂರು ಕ್ರಾಸ್ ಬಳಿಯಿರುವ ಶ್ರೀರಾಮ ಮಂದಿರದ ಹುಂಡಿ ಹಾಗೂ ಗಂಗಾವತಿ ತಾಲೂಕಿನ ಶ್ರೀರಾಮನಗರದ ಕನಕದುರ್ಗಾ ದೇವಸ್ಥಾನದ ಹುಂಡಿ ಕಳ್ಳತನವಾಗಿದೆ.
![ಕೊಪ್ಪಳ: ಎರಡು ದೇವಸ್ಥಾನಗಳಲ್ಲಿ ಹುಂಡಿ ಕಳ್ಳತನ theft of temples hundi](https://etvbharatimages.akamaized.net/etvbharat/prod-images/768-512-10949726-thumbnail-3x2-sin.jpg)
ಪ್ರತ್ಯೇಕ ಎರಡು ದೇವಸ್ಥಾನಗಳಲ್ಲಿ ಹುಂಡಿಗಳ ಕಳ್ಳತನ
ಎರಡು ದೇವಸ್ಥಾನಗಳಲ್ಲಿ ಹುಂಡಿಗಳ ಕಳ್ಳತನ
ಇದನ್ನೂ ಓದಿ:ಕೋವಿಡ್ ಎರಡನೇ ಅಲೆ: ಕಲಬುರಗಿಯಲ್ಲಿ ಜಾತ್ರೆ, ಉರುಸ್ ನಿಷೇಧಿಸಿದ ಜಿಲ್ಲಾಡಳಿತ
ಹುಂಡಿಯ ಜೊತೆಗೆ ಕಳ್ಳರು ಸಿಸಿ ಕ್ಯಾಮರಾ ಡ್ರೈವ್ ಹೊತ್ತೊಯ್ದಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಂಗಾವತಿ ಹಾಗೂ ಕಾರಟಗಿಯ ಗ್ರಾಮೀಣ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.
Last Updated : Mar 10, 2021, 6:25 PM IST