ಗಂಗಾವತಿ:ತುಂಗಭದ್ರಾ ಜಲಾಶಯಕ್ಕೆ ಹರಿದು ಬರುತ್ತಿರುವ ಅಪಾರ ಪ್ರಮಾಣದ ನೀರಿನಿಂದಾಗಿ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ. ಪರಿಣಾಮ ವಿರುಪಾಪುರಗಡ್ಡೆಯ ಸುತ್ತಲ ಪ್ರದೇಶ ಜಲಾವೃತವಾಗಿದ್ದು ವಿರುಪಾಪುರ ಗಡ್ಡೆ ಜಲಾವೃತವಾಗಿದ್ದು ಬಾಹ್ಯ ಸಂಪರ್ಕ ಕಳೆದುಕೊಂಡಿದೆ.
ತುಂಗಭದ್ರಾ ಜಲಾಶಯದ ಹೆಚ್ಚುವರಿ ನೀರು ಹೊರಕ್ಕೆ: ಸಂಪರ್ಕ ಕಳ್ಕೊಂಡ ವಿರುಪಾಪುರಗಡ್ಡೆ - ಗಂಗಾವತಿ
ಪ್ರವಾಸೋದ್ಯಮ ಕೇಂದ್ರ ಹಾಗೂ ವಿದೇಶಿಗರ ಮೋಜು-ಮಸ್ತಿಯ ತಾಣ ಎಂದು ಗುರುತಿಸಿಕೊಂಡಿರುವ ಗಂಗಾವತಿಯ ವಿರುಪಾಪುರ ಗಡ್ಡೆಯ ಬಾಹ್ಯ ಸಂಪರ್ಕ ಕಳೆದುಕೊಂಡಿದೆ.
![ತುಂಗಭದ್ರಾ ಜಲಾಶಯದ ಹೆಚ್ಚುವರಿ ನೀರು ಹೊರಕ್ಕೆ: ಸಂಪರ್ಕ ಕಳ್ಕೊಂಡ ವಿರುಪಾಪುರಗಡ್ಡೆ](https://etvbharatimages.akamaized.net/etvbharat/prod-images/768-512-4374493-thumbnail-3x2-kpl.jpg)
ವಿರುಪಾಪುರಗಡ್ಡೆ
ವಿರುಪಾಪುರಗಡ್ಡೆಯ ಸುತ್ತಮುತ್ತಲ ಪ್ರದೇಶ ಜಲಾವೃತವಾಗಿರುವ ಪರಿಣಾಮ, ವಾಹನ ಸಂಚಾರ ಸೇರಿದಂತೆ ಇಲ್ಲಿನ ಎಲ್ಲಾ ರಸ್ತೆ ಮಾರ್ಗಗಳು ಸ್ಥಗಿತವಾಗಿವೆ. ಕೇವಲ ಗಡ್ಡೆ ಮಾತ್ರವಲ್ಲ, ನದಿಪಾತ್ರದಲ್ಲಿನ ಹೊಲ-ತೋಟಗಳಿಗೂ ನೀರು ನುಗ್ಗಿದೆ. ಅಪಾಯಕಾರಿ ಮಟ್ಟದಲ್ಲಿ ನೀರು ಪ್ರವಹಿಸುತ್ತಿದೆ.
ಸಂಪರ್ಕ ಕಳೆದುಕೊಂಡ ವಿದೇಶಿಗರ ತಾಣ ವಿರುಪಾಪುರಗಡ್ಡೆ
ಕಳೆದ ಮೂರು ವಾರದ ಹಿಂದೆ ವಿರುಪಾಪುರ ಗಡ್ಡೆಯಲ್ಲಿ ಇದೇ ರೀತಿಯ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ಗಡ್ಡೆಯಲ್ಲಿ ಸಿಲುಕಿದ್ದವರ ರಕ್ಷಣೆಗೆ ಬಂದಿದ್ದ ಎನ್ಡಿಆರ್ಎಫ್ ತಂಡದ ಐವರು ಯೋಧರುಳ್ಳ ಬೋಟ್ ನೀರಲ್ಲಿ ಮಗುಚಿಬಿದ್ದ ಪ್ರಕರಣ ನಡೆದಿತ್ತು.