ಕರ್ನಾಟಕ

karnataka

ಕುಷ್ಟಗಿಯಲ್ಲಿ ಶಾಲೆಗ ಅಪ್ಪಳಿಸಿದ ಸಿಡಿಲು: ಮೂವರಿಗೆ ಗಾಯ

By

Published : Jul 17, 2022, 10:13 PM IST

ಮಳೆ ಬರುತ್ತಿದ್ದ ಹಿನ್ನೆಲೆ ಶಾಲೆಯಲ್ಲಿ ರಕ್ಷಣೆಗಾಗಿ ಕೆಲವರು ನಿಂತಿದ್ದರು. ಈ ವೇಳೆ ಶಾಲೆಗೆ ಸಿಡಿಲು ಬಡಿದಿದ್ದರಿಂದ ಮೂವರು ಗಾಯಗೊಂಡಿರುವ ಘಟನೆ ಕುಷ್ಟಗಿ ತಾಲೂಕಿನ ಕೊಡತಗೇರಾ ಗ್ರಾಮದಲ್ಲಿ ನಡೆದಿದೆ.

ಸಿಡಿಲು
ಸಿಡಿಲು

ಕುಷ್ಟಗಿ:ತಾಲೂಕಿನ ಕೊಡತಗೇರಾ ಗ್ರಾಮದಲ್ಲಿ ಸಿಡಿಲು ಶಾಲೆಗೆ ಅಪ್ಪಳಿಸಿದ್ದು, ಮಳೆಯಿಂದ ರಕ್ಷಣೆಗಾಗಿ ಶಾಲೆಯಲ್ಲಿ ಕುಳಿತವರಿಗೆ ಗಾಯಗಳಾಗಿವೆ. ಗುಡುಗು ಸಿಡಿಲು ಸಹಿತ ಮಳೆಯಾಗುತ್ತಿದ್ದು, ಈ ವೇಳೆ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಲವರು ನಿಂತಿದ್ದರು. ಕಲ್ಲಪ್ಪ ಮಂಗಳಪ್ಪ ಪೂಜಾರ, ಮಲ್ಲಪ್ಪ ಹೋಬಳಪ್ಪ ಗೌಡರ್, ಹನಮಪ್ಪ ಬಾಳಪ್ಪ ಪಿಳಿಬಂಟರ್ ಎಂಬುವವರು ಗಾಯಗೊಂಡಿದ್ದಾರೆ.

ಗಾಯಗೊಂಡ ವ್ಯಕ್ತಿಗಳು

ಭಾನುವಾರ ಶಾಲೆಗೆ ರಜಾ ದಿನವಾಗಿದ್ದರಿಂದ ಮಕ್ಕಳಿಗೆ ಆಗಬಹುದಾದ ಅಪಾಯ ತಪ್ಪಿದಂತಾಗಿದೆ. ಹನುಮಸಾಗರ ಪಿಎಸ್​ಐ ಅಶೋಕ ಬೇವೂರು ಪ್ರತಿಕ್ರಿಯಿಸಿ, ಶಾಲೆಗೆ ಸಿಡಿಲು ಅಪ್ಪಳಿಸಿದ್ದು, ಒಂದಿಬ್ಬರಿಗೆ ಗಾಯವಾಗಿದ್ದು, ಯಾರಿಗೂ ಗಂಭೀರ ಪ್ರಮಾಣದ ಗಾಯ ಆಗಿಲ್ಲ. ಎಲ್ಲಾ ಅಪಾಯದಿಂದ ಪಾರಾಗಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ:ಸೆಲ್ಫಿ ಗೀಳು.. ನೀರಿನ ರಭಸಕ್ಕೆ ಕೊಚ್ಚಿಹೋದ ಕಲಘಟಗಿಯ ಯುವಕ

ABOUT THE AUTHOR

...view details