ಕರ್ನಾಟಕ

karnataka

WATCH: ಹೊಸಪೇಟೆ ಕೋರ್ಟ್​ ಆವರಣದಲ್ಲಿ ವಕೀಲನ ಹತ್ಯೆಯ ಮೈ ಜುಂ ಎನ್ನುವ ದೃಶ್ಯ

By

Published : Mar 1, 2021, 4:20 PM IST

ಹೊಸಪೇಟೆ ಕೋರ್ಟ್ ಆವರಣದಲ್ಲಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದ ಭೀಕರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ವಕೀಲನ ಬರ್ಬರ ಹತ್ಯೆಯ ಮೈ ಝುಂ ಎನ್ನುವ ದೃಶ್ಯ
ವಕೀಲನ ಬರ್ಬರ ಹತ್ಯೆಯ ಮೈ ಝುಂ ಎನ್ನುವ ದೃಶ್ಯ

ಹೊಸಪೇಟೆ:ಹಾಡಹಗಲೇ ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ನೆತ್ತರು ಹರಿದಿತ್ತು. ವಕೀಲನನ್ನು ಬರ್ಬರವಾಗಿ ಕೊಲೆ ಮಾಡಿರುವ ಪ್ರಕರಣದಿಂದ ನೂತನ ವಿಜಯನಗರ ಜಿಲ್ಲೆಯ ಜನರು ಬೆಚ್ಚಿಬಿದ್ದಿದ್ದರು. ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವಕೀಲನ ಬರ್ಬರ ಹತ್ಯೆಯ ಮೈ ಝುಂ ಎನ್ನುವ ದೃಶ್ಯ

ನಗರದ ಕೋರ್ಟ್ ಆವರಣದಲ್ಲಿ ಕಾಂಗ್ರೆಸ್​ ಮುಖಂಡ ಮತ್ತು ವಕೀಲರಾಗಿದ್ದ ತಾರಿಹಳ್ಳಿ ವೆಂಕಟೇಶ (48) ಅವರನ್ನು ಮಚ್ಚಿನಿಂದ ಕೊಚ್ಚಿ ವ್ಯಕ್ತಿವೋರ್ವ ಹತ್ಯೆ ಮಾಡಿದ್ದ.

ವಕೀಲ ತಾರಿಹಳ್ಳಿ ವೆಂಕಟೇಶ ಅವರ ತಲೆಗೆ ಮಚ್ಚಿನಿಂದ ಹೊಡೆದು ಕೊಲೆ ಮಾಡಲಾಗಿದ್ದು, ಕೌಟುಂಬಿಕ ಕಲಹದಿಂದ ಕೊಲೆ ನಡೆದಿತ್ತು. ಕೊಲೆ ಮಾಡಿದ ಆರೋಪಿ ಮನೋಜ್​, ವೆಂಕಟೇಶ ಅವರ ಸಂಬಂಧಿಕನಾಗಿದ್ದು, ಪೊಲೀಸರು ಈತನನ್ನು ವಶಕ್ಕೆ ಪಡೆದುಕೊಂಡಿದ್ದರು.

ಈ ಘಟನೆಯ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮೈ ಜುಂ ಎನ್ನುವಂತಿದೆ.

TAGGED:

ABOUT THE AUTHOR

...view details