ಕರ್ನಾಟಕ

karnataka

ETV Bharat / state

ಮಾಸಾಶನಕ್ಕಾಗಿ ನೋಂದಣಿ: ಸಾಮಾಜಿಕ ಅಂತರ ಮರೆತ ಹಿರಿಯ ಜೀವಗಳು - Kushtagi social gap News

ಇಲ್ಲಿನ ತಹಶೀಲ್ದಾರ್​​ ಕಚೇರಿಯಲ್ಲಿ ಸೋಮವಾರದಿಂದ ಸಾರ್ವಜನಿಕರ ಅನಗತ್ಯ ಪ್ರವೇಶ ನಿರ್ಬಂಧಿಸಲಾಗಿದೆ. ಆದರೆ ಕಚೇರಿ ಆವರಣದಲ್ಲಿ ಸಾಮಾಜಿಕ ಭದ್ರತಾ ಯೋಜನೆಯ ದಾಖಲೀಕರಣಕ್ಕಾಗಿ ಆಧಾರ್​​​ ಸೀಡಿಂಗ್​​​​​ಗೆ ಯಾವುದೇ ಅಗತ್ಯ ಕ್ರಮಕ್ಕೆ ತಾಲೂಕಾಡಳಿತ ಮುಂಜಾಗ್ರತೆ ವಹಿಸಿಲ್ಲ ಎನ್ನಲಾಗಿದೆ.

ಸಾಮಾಜಿಕ ಅಂತರ ಮರೆತ ಹಿರಿಯ ಜೀವಗಳು
ಸಾಮಾಜಿಕ ಅಂತರ ಮರೆತ ಹಿರಿಯ ಜೀವಗಳು

By

Published : Jul 14, 2020, 12:55 PM IST

ಕುಷ್ಟಗಿ(ಕೊಪ್ಪಳ): ತಾಲೂಕಿನಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ ಸಾಮಾಜಿಕ ಭದ್ರತೆ ಯೋಜನೆಗಾಗಿ, ಸಾಮಾಜಿಕ ಅಂತರ ಕಾಪಾಡದಿರುವುದು ಆತಂಕ ತಂದೊಡ್ಡಿದೆ.

ಇಲ್ಲಿನ ತಹಶೀಲ್ದಾರ್​ ಕಚೇರಿಯಲ್ಲಿ ಸೋಮವಾರದಿಂದ ಸಾರ್ವಜನಿಕರ ಅನಗತ್ಯ ಪ್ರವೇಶ ನಿರ್ಬಂಧಿಸಲಾಗಿದೆ. ಆದರೆ ಕಚೇರಿ ಆವರಣದಲ್ಲಿ ಸಾಮಾಜಿಕ ಭದ್ರತಾ ಯೋಜನೆಯ ದಾಖಲೀಕರಣಕ್ಕಾಗಿ ಆಧಾರ್​​​ ಸೀಡಿಂಗ್​​ಗೆ ಯಾವೂದೇ ಅಗತ್ಯ ಕ್ರಮಕ್ಕೆ ತಾಲೂಕಾಡಳಿತ ಮುಂಜಾಗ್ರತೆ ವಹಿಸಿಲ್ಲ ಎನ್ನಲಾಗಿದೆ.

ಸಾಮಾಜಿಕ ಅಂತರ ಮರೆತ ಹಿರಿಯ ಜೀವಗಳು

ಜೀವನ ನಿರ್ವಹಣೆಗೆ ಆಧಾರವಾಗಿದ್ದ ಮಾಸಾಶನ ಸ್ಥಗಿತವಾದ ಹಿನ್ನೆಲೆಯಲ್ಲಿ ವಿವಿಧ ಗ್ರಾಮಗಳ ಸಾಮಾಜಿಕ ಭದ್ರತಾ ಯೋಜನೆಯ ಫಲಾನುಭವಿಗಳು ಕೊರೊನಾ ಭಯ ಲೆಕ್ಕಿಸದೇ ತಹಶೀಲ್ದಾರ್​ ಕಚೇರಿಗೆ ಬರುತ್ತಿದ್ದಾರೆ. ಮಹಾಮಾರಿ ಕೊರೊನಾ ಸಂಬಂಧ ಸರ್ಕಾರ ಹಿರಿಯರನ್ನು ಹೊರಗೆ ಕಳುಹಿಸಬೇಡಿ ಎಂದು ಹೇಳುತ್ತಿದ್ದರೂ ಈ ಹಿರಿಯ ಜೀವಗಳು ಕೊರೊನಾ ಭಯದ ನಡುವೆಯೂ ಜೀವನ ನಿರ್ವಹಣೆಗೆ ಮಾಸಾಶನಕ್ಕಾಗಿ ಹೊರ ಬರುವಂತಾಗಿದೆ.

ಆಧಾರ್ ಜೋಡಣೆಯ ಖಾತೆ ವಿವರ ನೀಡಿದಾಗ್ಯೂ ಮಾಸಾಶನ ಪಾವತಿಯಾಗುತ್ತಿಲ್ಲ. ಮಾಸಾಶನ ಬರುತ್ತಿಲ್ಲ ಎಂಬ ಕಾರಣಕ್ಕೆ ಕುಟುಂಬ ಸದಸ್ಯರ ನಿರ್ಲಕ್ಷ್ಯಕ್ಕೆ ಗುರಿಯಾಗುವುದನ್ನು ತಪ್ಪಿಸಲು ನೂರಕ್ಕೂ ಅಧಿಕ ಜನರು ತಹಶೀಲ್ದಾರ್​ ಕಚೇರಿಗೆ ಬರುವುದನ್ನು ತಪ್ಪಿಸಲು ಅಗತ್ಯ ಪೂರಕ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ವ್ಯಕ್ತವಾಗಿದೆ.

ABOUT THE AUTHOR

...view details