ಗಂಗಾವತಿ:ಲಾಕ್ ಡೌ್ನ್ ಹಿನ್ನೆಲೆ ಎಲ್ಲಾ ದೇಗುಲಗಳನ್ನು ಬಂದ್ ಮಾಡಲಾಗಿದ್ದು, ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಕೋತಿಗಳಿಗೆ ವಿಶೇಷ ಆಹಾರದ ವ್ಯವಸ್ಥೆ ಮಾಡಿ ಸಾಂಕೇತಿಕವಾಗಿ ಹನುಮ ಜಯಂತಿ ಆಚರಿಸಲಾಯಿತು.
ಅಂಜನಾದ್ರಿ ಬೆಟ್ಟದಲ್ಲಿ ಕೋತಿಗಳಿಗೆ ಆಹಾರ ಕೊಟ್ಟು ಸಾಂಕೇತಿಕ ಹನುಮ ಜಯಂತಿ ಆಚರಣೆ - symbolic Hanuman Jayanti celebration of feeding monkeys
ಲಾಕ್ ಡೌನ್ ಹಿನ್ನೆಲೆ ದೇಗುಲಗಳು ಬಂದ್ ಆಗಿದ್ದು ಗಂಗಾವತಿಯಲ್ಲಿ ಅಂಜನಾದ್ರಿ ಬೆಟ್ಟದ ಕೋತಿಗಳಿಗೆ ಆಹಾರ ಕೊಟ್ಟು ಸಾಂಕೇತಿಕವಾಗಿ ಹನುಮ ಜಯಂತಿ ಆಚರಿಸಲಾಯಿತು.
![ಅಂಜನಾದ್ರಿ ಬೆಟ್ಟದಲ್ಲಿ ಕೋತಿಗಳಿಗೆ ಆಹಾರ ಕೊಟ್ಟು ಸಾಂಕೇತಿಕ ಹನುಮ ಜಯಂತಿ ಆಚರಣೆ symbolic Hanuman Jayanti celebration of feeding monkeys](https://etvbharatimages.akamaized.net/etvbharat/prod-images/768-512-6709290-519-6709290-1586332873739.jpg)
ಕೋತಿಗಳಿಗೆ ಆಹಾರ ಕೊಟ್ಟು ಸಾಂಕೇತಿಕ ಹನುಮ ಜಯಂತಿ ಆಚರಣೆ
ಕೊರೊನಾದ ಭೀತಿಯಿಂದಾಗಿ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಸ್ಥಗಿತವಾಗಿದ್ದರಿಂದ, ಬೆಟ್ಟದಲ್ಲಿ ವಾಸಿಸುವ ಕೋತಿಗಳು ಆಹಾರವಿಲ್ಲದೆ ಪರದಾಡುತ್ತಿದ್ದವು.
ಕೋತಿಗಳಿಗೆ ಆಹಾರ ಕೊಟ್ಟು ಹನುಮ ಜಯಂತಿ ಆಚರಣೆ
ಹನುಮ ಜಯಂತಿ ಅಂಗವಾಗಿ ಕೋತಿಗಳಿಗೆ ಶೇಂಗಾಕಾಳು, ನೆನೆಸಿದ ಕಡಲೆಕಾಳು, ಬಾಳೆಹಣ್ಣು, ದ್ರಾಕ್ಷಿ, ಕಲ್ಲಂಗಡಿ ಹಣ್ಣು ನೀಡಲಾಯಿತು. ಕೆಲ ಭಕ್ತರು ವಿಶೇಷ ಆಹಾರ ತಂದು ನೀಡುತ್ತಿದ್ದ ದೃಶ್ಯ ಕಂಡು ಬಂತು.