ಕರ್ನಾಟಕ

karnataka

ETV Bharat / state

17 ವರ್ಷದ ಸೇವೆ ಬಳಿಕ ನಿವೃತ್ತಿ.. ಊರ ತುಂಬಾ ಯೋಧನ ಮೆರವಣಿಗೆ ಮಾಡಿ ಅಭಿಮಾನಪಟ್ಟ ಜನರು - undefined

ಕುದರಿಮೋತಿ ಗ್ರಾಮದ ಯೋಧ ಗವಿಸಿದ್ದಪ್ಪ ದೊಡ್ಡಮನಿ ಅವರು ಸೇನೆಯಲ್ಲಿ 17 ವರ್ಷ ಸೇವೆ ಸಲ್ಲಿಸಿದ್ದಾರೆ. ಸೇವಾ ನಿವೃತ್ತಿ ಹೊಂದಿ ನಿನ್ನೆ ಸಂಜೆ ಸ್ವಗ್ರಾಮಕ್ಕೆ ಮರಳಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮಸ್ಥರುಬಾಜಾ ಭಜಂತ್ರಿ, ಕಳಸದೊಂದಿಗೆ ಬಂದು ಸ್ವಾಗತಿಸಿದ್ದಾರೆ.

ಅದ್ಧೂರಿ ಮೆರವಣಿಗೆ ಮೂಲಕ ಸ್ವಾಗತಿಸಿದ ಗ್ರಾಮಸ್ಥರು

By

Published : May 4, 2019, 11:33 AM IST

ಕೊಪ್ಪಳ:ಸೇನೆಯಲ್ಲಿ 17 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾದ ಯೋಧನನ್ನು ಜನರು ತಮ್ಮ ಇಡೀ ಗ್ರಾಮದ ತುಂಬ ಅದ್ಧೂರಿ ಮೆರವಣಿಗೆ ಮಾಡಿದ್ದಾರೆ.

ಜಿಲ್ಲೆಯ ಯಲಬುರ್ಗಾ ತಾಲೂಕಿನ ಕುದರಿಮೋತಿ ಗ್ರಾಮದ ಯೋಧ ಗವಿಸಿದ್ದಪ್ಪ ದೊಡ್ಡಮನಿ ಅವರು ಸೇನೆಯಲ್ಲಿ 17 ವರ್ಷ ಸೇವೆ ಸಲ್ಲಿಸಿದ್ದಾರೆ. ಸೇವಾ ನಿವೃತ್ತಿ ಹೊಂದಿ ನಿನ್ನೆ ಸಂಜೆ ಸ್ವಗ್ರಾಮಕ್ಕೆ ಮರಳಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮಸ್ಥರು ಬಾಜಾ ಭಜಂತ್ರಿ, ಕಳಸದೊಂದಿಗೆ ಬಂದು ಸ್ವಾಗತಿಸಿದ್ದಾರೆ. ಅಲ್ಲದೆ, ಸುಮಾರು 1 ಕಿ.ಮೀ.ವರೆಗೆ ಯೋಧನನ್ನು ವಾಹನದಲ್ಲಿ ಮೆರವಣಿಗೆ ಮಾಡಿದ್ದಾರೆ.

ಅದ್ಧೂರಿ ಮೆರವಣಿಗೆ ಮೂಲಕ ಸ್ವಾಗತಿಸಿದ ಗ್ರಾಮಸ್ಥರು

ಅಲ್ಲದೆ ತ್ರಿವರ್ಣ ಧ್ವಜದೊಂದಿಗೆ ಭಾರತ್ ಮಾತಾ ಕಿ ಜೈ ಎಂಬ ಘೋಷಣೆಯೊಂದಿಗೆ ಯೋಧನನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಿ ಗೌರವ ಸಲ್ಲಿಸಿದರು. ಬಳಿಕ ಯೋಧ ಗವಿಸಿದ್ದಪ್ಪ ಹಾಗೂ ಅವರ ಪತ್ನಿಯನ್ನು ಸನ್ಮಾನಿಸಿ ಸಂಭ್ರಮಿಸಿದರು. ಗ್ರಾಮಸ್ಥರ ಈ ಪ್ರೀತಿಯನ್ನು ಕಂಡು ಯೋಧ ಗ್ರಾಮಸ್ಥರಿಗೆ ಕೃತಜ್ಞತೆ ಅರ್ಪಿಸಿದರು.

For All Latest Updates

TAGGED:

ABOUT THE AUTHOR

...view details