ಕರ್ನಾಟಕ

karnataka

ETV Bharat / state

ನಮಗೂ ಲ್ಯಾಪ್​ಟಾಪ್​​ ನೀಡಿ ಎಂದು ಶಾಸಕರಿಗೆ ಮುತ್ತಿಗೆ ಹಾಕಿದ ವಿದ್ಯಾರ್ಥಿಗಳು

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್​​ ವಿತರಣೆ ಮಾಡಲೆಂದು ಶಾಸಕ ಹಾಲಪ್ಪ ಆಚಾರ್ ಆಗಮಿಸಿದ್ದು, ಈ ವೇಳೆ ನಮಗೂ ಲ್ಯಾಪ್​ಟಾಪ್​ ನೀಡಿ ಎಂದು ದ್ವಿತೀಯ ಹಾಗೂ ತೃತೀಯ ವರ್ಷದ ವಿದ್ಯಾರ್ಥಿಗಳು ಶಾಸಕರಿಗೆ ಮುತ್ತಿಗೆ ಹಾಕಿದರು.

By

Published : Jan 27, 2020, 1:59 PM IST

Students sieges the MLA
ಶಾಸಕರಿಗೆ ಮುತ್ತಿಗೆ ಹಾಕಿದ ವಿದ್ಯಾರ್ಥಿಗಳು

ಕೊಪ್ಪಳ: ತಮಗೂ ಲ್ಯಾಪ್​​ಟಾಪ್ ನೀಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಶಾಸಕರಿಗೆ ಮುತ್ತಿಗೆ ಹಾಕಿದ ಘಟನೆ ಜಿಲ್ಲೆಯ ಯಲಬುರ್ಗಾದಲ್ಲಿ ನಡೆದಿದೆ‌.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಇಂದು ಶಾಸಕ ಹಾಲಪ್ಪ ಆಚಾರ್ ಲ್ಯಾಪ್​​ಟಾಪ್ ವಿತರಿಸಲು ಆಗಮಿಸಿದ ವೇಳೆ, ಪದವಿ ಹಂತದ ದ್ವಿತೀಯ ಹಾಗೂ ತೃತೀಯ ವರ್ಷದ ವಿದ್ಯಾರ್ಥಿಗಳು ಸಹ ತಮಗೂ ಸರ್ಕಾರದಿಂದ ಲ್ಯಾಪ್​​ಟಾಪ್ ನೀಡುವಂತೆ ಆಗ್ರಹಿಸಿ ಶಾಸಕರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಶಾಸಕರಿಗೆ ಮುತ್ತಿಗೆ ಹಾಕಿದ ವಿದ್ಯಾರ್ಥಿಗಳು

ವಿದ್ಯಾರ್ಥಿಗಳು ಮುತ್ತಿಗೆ ಹಾಕಿದ್ದನ್ನು ಕಂಡು ಶಾಸಕ ಹಾಲಪ್ಪ ಆಚಾರ್, ಈ ಕೂಡಲೇ ದ್ವೀತಿಯ, ತೃತೀಯ ವಿದ್ಯಾರ್ಥಿಗಳಿಗೆ ಲ್ಯಾಪ್​​ಟಾಪ್ ವಿತರಣೆ ಮಾಡುವ ಭರವಸೆ ನೀಡಿ ಸಮಾಧಾನಗೊಳಿಸಿದರು. ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟರು.

For All Latest Updates

ABOUT THE AUTHOR

...view details