ಗಂಗಾವತಿ :ಸದಾ ಅಧಿಕಾರದಲ್ಲೇ ಇರಬೇಕು. ಅದರಲ್ಲೂ ರಾಜಕೀಯದ ಮೋಹವೇ ಅಂತಹದ್ದು ಎಂಬುದನ್ನು ಮಾಜಿ ಸಚಿವ ಹಾಗೂ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ಅವರು ಸಾಬೀತು ಪಡಿಸಿದ್ದಾರೆ.
ತಂಗಡಗಿಯವರೇ ನೀವು ಮಾಜಿ ಶಾಸಕರು ಮರೀಬ್ಯಾಡಿ.. ಇನ್ನೂ ಅಧಿಕಾರದ ಗುಂಗಿನಲ್ಲೇ ಇದೀರಾ.. - gangavathi latest news
ಕೊರೊನಾ ಸಂದರ್ಭದಲ್ಲಿ ಮಾರುಕಟ್ಟೆ ಸಿಗದೇ ಅತಂತ್ರವಾಗಿದ್ದ ರೈತರ ಬಳಿಗೆ ತೆರಳಿ ತರಕಾರಿ ಖರೀದಿಸಿ ಅತ್ಯಂತ ಕಡಿಮೆ ಬೆಲೆಗೆ ಗ್ರಾಹಕರಿಗೆ ತಲುಪಿಸಿದ ಹಾಗೂ ಕೊರೊನಾ ವಾರಿಯರ್ಸ್ಗೆ ಉಚಿತ ತರಕಾರಿ ನೀಡಿದ ಕಾರ್ಯಕರ್ತರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ನಿನ್ನೆ ಶ್ರೀರಾಮನಗರದಲ್ಲಿ ಮಾಜಿ ಸಚಿವ ಶಿವರಾಜ್ ತಂಗಡಗಿ ಹಮ್ಮಿಕೊಂಡಿದ್ದರು.
![ತಂಗಡಗಿಯವರೇ ನೀವು ಮಾಜಿ ಶಾಸಕರು ಮರೀಬ್ಯಾಡಿ.. ಇನ್ನೂ ಅಧಿಕಾರದ ಗುಂಗಿನಲ್ಲೇ ಇದೀರಾ.. Shivaraja tangadi](https://etvbharatimages.akamaized.net/etvbharat/prod-images/768-512-7123634-thumbnail-3x2-malala.jpg)
ಕಾರ್ಯಕ್ರಮವೊಂದರಲ್ಲಿ ಬಾಯಿ ತಪ್ಪಿದ ಮಾಜಿ ಸಚಿವರು, ನಾನು ಶಾಸಕನಾಗಿ ಎಂದು ಹೇಳಿಕೊಂಡಿದ್ದಾರೆ. ಕೊರೊನಾ ಸಂದರ್ಭದಲ್ಲಿ ಮಾರುಕಟ್ಟೆ ಸಿಗದೇ ಅತಂತ್ರವಾಗಿದ್ದ ರೈತರ ಬಳಿಗೆ ತೆರಳಿ ತರಕಾರಿ ಖರೀದಿಸಿ ಅತ್ಯಂತ ಕಡಿಮೆ ಬೆಲೆಗೆ ಗ್ರಾಹಕರಿಗೆ ತಲುಪಿಸಿದ ಹಾಗೂ ಕೊರೊನಾ ವಾರಿಯರ್ಸ್ಗೆ ಉಚಿತ ತರಕಾರಿ ನೀಡಿದ ಕಾರ್ಯಕರ್ತರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ನಿನ್ನೆ ಶ್ರೀರಾಮನಗರದಲ್ಲಿ ಮಾಜಿ ಸಚಿವರು ಹಮ್ಮಿಕೊಂಡಿದ್ದರು.
ಈ ಸಂದರ್ಭದಲ್ಲಿ ಕಾರ್ಯಕರ್ತರನ್ನು ಸನ್ಮಾನಿಸಿ ಮಾತನಾಡಿದ್ದ ಅವರು, ಬೆಂಬಲಿಗರ ಪಡೆಯನ್ನು ಹುರಿದುಂಬಿಸುವ ಭರದಲ್ಲಿ ಶಾಸಕನಾಗಿ ನಾನು ನಿಮ್ಮನ್ನೆಲ್ಲ ಪಡೆದಿದ್ದಕ್ಕೆ ಧನ್ಯ ಎಂದು ಕಾರ್ಯಕರ್ತರಿಗೆ ಕೃತಜ್ಞತೆ ಅರ್ಪಿಸಿದರು. ಮಾತಿನ ಭರಾಟೆಯಲ್ಲಿ ನಾಲಿಗೆ ಟ್ವಿಸ್ಟ್ ಆಗಿರೋದು ಅಲ್ಲಿದ್ದ ಹಲವರ ಗಮನಕ್ಕೆ ಬರಲಿಲ್ಲ.