ಕರ್ನಾಟಕ

karnataka

ETV Bharat / state

ಏರ್ ಶೋ ಅಗ್ನಿ ಅನಾಹುತದಲ್ಲಿ ರಾಜ್ಯ ಸರ್ಕಾರದ ವೈಫಲ್ಯವಿಲ್ಲ: ಈ. ತುಕಾರಾಂ

ಎಂಸಿಐ ಷರತ್ತುಗಳಿಗನುಗುಣವಾಗಿ ಕೊಪ್ಪಳ‌ ಮೆಡಿಕಲ್‌ ಕಾಲೇಜ್​ ಕಲ್ಪಿಸಲಾಗಿದ್ದು ಯಾವುದೇ ಸಮಸ್ಯೆ ಇಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಈ. ತುಕಾರಾಂ ತಿಳಿಸಿದರು.

By

Published : Feb 25, 2019, 4:25 PM IST

ಈ. ತುಕಾರಾಂ

ಕೊಪ್ಪಳ: ಬೆಂಗಳೂರಿನ‌ ಯಲಹಂಕದಲ್ಲಿ‌ ಏರ್ ಶೋ ವೇಳೆ‌ ನಡೆದ ಅಗ್ನಿ ಅನಾಹುತ ಘಟನೆಯಲ್ಲಿ ರಾಜ್ಯ ಸರ್ಕಾರದ ವೈಫಲ್ಯವಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಈ. ತುಕಾರಾಂ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅದು ಕೇಂದ್ರ ಸರ್ಕಾರದ ಕಾರ್ಯಕ್ರಮ. ಅಗತ್ಯ ಹಾಗೂ ಮುಂಜಾಗ್ರತೆ ಕ್ರಮಗಳನ್ನು ರಾಜ್ಯ ಸರ್ಕಾರ‌‌ ಕೈಗೊಂಡಿದೆ.‌ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಸಾಕಷ್ಟು ಸಹಕಾರ ನೀಡಿದೆ. ಇಲ್ಲಿ ನಡೆದ ಅಗ್ನಿ ಅನಾಹುತಕ್ಕೆ ರಾಜ್ಯ ಸರ್ಕಾರದ ವೈಫಲ್ಯವಿಲ್ಲ. ಮಾಜಿ ಸಿಎಂ ಯಡಿಯೂರಪ್ಪ ಬೇರೆ ಉದ್ದೇಶವಿಟ್ಟುಕೊಂಡು ರಾಜ್ಯ ಸರ್ಕಾರದ ವೈಫಲ್ಯವಿದೆ ಎಂದು ಆರೋಪಿಸಿದ್ದಾರೆ. ಒಬ್ಬ ಮಾಜಿ ಸಿಎಂ ಆಗಿ ಅವರು ಈ ರೀತಿ ಮಾತನಾಡಬಾರದು ಎಂದರು.

ಈ. ತುಕಾರಾಂ
ಈ. ತುಕಾರಾಂ

ಇನ್ನು ಬಂಡಿಪುರ ಅರಣ್ಯದಲ್ಲಿ ನಡೆದ ಕಾಡ್ಗಿಚ್ಚು ಘಟನೆ ಮನಸಿಗೆ ನೋವು ತಂದಿದೆ. ಬೆಂಕಿ ನಂದಿಸಲು ಬೇಕಾದ ಎಲ್ಲ ಅಗತ್ಯ ಕ್ರಮಗಳನ್ಜು ಸರ್ಕಾರ‌ ಕೈಗೊಂಡಿದೆ ಎಂದು ಹೇಳಿದರು. ಕೊಪ್ಪಳ ಮೆಡಿಕಲ್ ಕಾಲೇಜು ಸೇರಿದಂತೆ ರಾಜ್ಯದ ಎಲ್ಲ ಮೆಡಿಕಲ್‌ ಕಾಲೇಜುಗಳಿಗೆ ಸೌಲಭ್ಯ ನೀಡಲಾಗಿದೆ. ಎಂಸಿಐ ಷರತ್ತುಗಳಿಗನುಗುಣವಾಗಿ ಕೊಪ್ಪಳ‌ ಮೆಡಿಕಲ್‌ ಕಾಲೇಜ್​ ಕಲ್ಪಿಸಲಾಗಿದ್ದು ಯಾವುದೇ ಸಮಸ್ಯೆ ಇಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಈ. ತುಕಾರಾಂ ಇದೇ ಸಂದರ್ಭದಲ್ಲಿ ಹೇಳಿದರು.

ABOUT THE AUTHOR

...view details