ಕರ್ನಾಟಕ

karnataka

ಬಿಪಿಎಲ್ ಕಾರ್ಡ್ ರದ್ದು ಮಾಡಿದ್ರೆ ಬಿಜೆಪಿಯವರ ಮನೆ ಮನೆಗೆ ಹೋಗಿ ಹೋರಾಡ್ತೀವಿ.. ತಂಗಡಗಿ

By

Published : Feb 15, 2021, 4:28 PM IST

ಉಮೇಶ್ ಕತ್ತಿ ನನ್ನ ಸ್ನೇಹಿತ, ಅವರು ಬಹಳ ಕಷ್ಟಪಟ್ಟು ಸಚಿವರಾಗಿದ್ದಾರೆ.‌ ಯಾಕೆ ಇಂತಹ ನಿರ್ಧಾರ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ. ಉಮೇಶ್ ಕತ್ತಿ ಬಡವರ ಪರ ಇರಲಿ, ಇಲ್ಲದಿದ್ದರೆ ರಾಜೀನಾಮೆ ನೀಡಲಿ..

Protest against Union farm Bill at Kopppal
ಮಾಜಿ ಸಚಿವ ಶಿವರಾಜ

ಕೊಪ್ಪಳ : ಬಿಪಿಎಲ್ ಕಾರ್ಡ್ ರದ್ದು ಮಾಡಿದರೆ ಬಿಜೆಪಿಯವರ ಮನೆ ಮನೆಗೆ ಹೋಗಿ ಹೋರಾಟ ಮಾಡುತ್ತೇವೆ ಎಂದು ಮಾಜಿ ಸಚಿವ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ಎಚ್ಚರಿಸಿದ್ದಾರೆ.

ಜಿಲ್ಲೆಯ ಕಾರಟಗಿ ತಾಲೂಕಿನ ಸಿದ್ಧಾಪುರ ಗ್ರಾಮದಲ್ಲಿ ಮಾತನಾಡಿದ ಅವರು, ಕೂಲಿ ಕಾರ್ಮಿಕರು ಕೂಡ ಇಂದು ಬೈಕ್ ಹೊಂದಿದ್ದಾರೆ. ಬೈಕ್ ಹೊಂದಿದ್ದರೆ ಬಿಪಿಎಲ್ ಕಾರ್ಡ್ ರದ್ದು ಮಾಡುತ್ತೇವೆ ಎಂಬುವುದು ಯಾವ ನ್ಯಾಯ?. ಸಾಮಾನ್ಯ ಜನರು ಬದುಕಬಾರದು ಎಂಬ ಉದ್ದೇಶಕ್ಕೆ ಸಚಿವ ಉಮೇಶ್​ ಕತ್ತಿ, ಆ ರೀತಿ ಹೇಳಿದ್ದಾರೆ ಎಂದರು.

ಸಚಿವ ಕತ್ತಿ ಅವರ ಹೇಳಿಕೆ ಖಂಡಿಸಿದ ಮಾಜಿ ಸಚಿವ ಶಿವರಾಜ ತಂಗಡಗಿ..

ಓದಿ : ಬಿಪಿಎಲ್ ಮಾನದಂಡಗಳಲ್ಲಿ ಬದಲಾವಣೆಯಿಲ್ಲ; ಉಮೇಶ್ ಕತ್ತಿ

ಉಮೇಶ್ ಕತ್ತಿ ನನ್ನ ಸ್ನೇಹಿತ, ಅವರು ಬಹಳ ಕಷ್ಟಪಟ್ಟು ಸಚಿವರಾಗಿದ್ದಾರೆ.‌ ಯಾಕೆ ಇಂತಹ ನಿರ್ಧಾರ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ. ಉಮೇಶ್ ಕತ್ತಿ ಬಡವರ ಪರ ಇರಲಿ, ಇಲ್ಲದಿದ್ದರೆ ರಾಜೀನಾಮೆ ನೀಡಲಿ ಎಂದು ಹೇಳಿದರು.

For All Latest Updates

TAGGED:

ABOUT THE AUTHOR

...view details