ಕರ್ನಾಟಕ

karnataka

ETV Bharat / state

ಕೊಪ್ಪಳದಲ್ಲಿ ಪೊಲೀಸ್ ಕಾವಲಿನಲ್ಲಿ ನಡೆದ ಸಮುದಾಯದ ಸುದ್ದಿಗೋಷ್ಠಿ - ಕೊಪ್ಪಳದಲ್ಲಿ ನಿಷೇಧಾಜ್ಞೆ ಜಾರಿ

ಪೌರತ್ವ ಕಾಯ್ದೆ ದೇಶದಲ್ಲಿ ವಿವಾದ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ನಿಷೇಧಾಜ್ಞೆ ಜಾರಿಯಲ್ಲಿದೆ. ಈ ನಡುವೆ ಸಮುದಾಯವೊಂದು ಪೊಲೀಸ್​ ಸರ್ಪಗಾವಲಿನಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿರುವ ಘಟನೆ ನಡೆದಿದೆ.

ಪೊಲೀಸ್ ಕಾವಲಿನಲ್ಲಿ ನಡೆದ ಸಮುದಾಯದ ಸುದ್ದಿಗೋಷ್ಠಿ
Press Meet made in police security in koppal

By

Published : Dec 20, 2019, 5:58 PM IST

ಗಂಗಾವತಿ :ಜಿಲ್ಲೆಯಲ್ಲಿ ಡಿ.22ರವರೆಗೆ ಐಪಿಸಿ ಸೆಕ್ಷನ್‌ 144ರ ಅಡಿ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ನಗರದಲ್ಲಿ ಸಮುದಾಯವೊಂದರ ಮುಖಂಡರು ಪೊಲೀಸರ ಕಾವಲಿನಲ್ಲಿ ಸುದ್ದಿಗೋಷ್ಠಿ ನಡೆಸಿರುವ ಘಟನೆ ನಡೆಯಿತು.

ಪೊಲೀಸ್ ಕಾವಲಿನಲ್ಲಿ ನಡೆದ ಸಮುದಾಯದ ಸುದ್ದಿಗೋಷ್ಠಿ

ನಗರದ ಹೊಸಳ್ಳಿ ರಸ್ತೆಯಲ್ಲಿರುವ ವಿಶ್ವಕರ್ಮ ಗಾಯತ್ರಿ ದೇಗುದಲ್ಲಿ ಸಮುದಾಯದ ಮುಖಂಡರು ಜ.1ರಂದು ಆಚರಿಸಲಿರುವ ಅಮರ ಶಿಲ್ಪಿ ಜಕಣಾಚಾರಿ ಜಯಂತಿ ಹಿನ್ನೆಲೆಯಲ್ಲಿ ಮಾಹಿತಿ ನೀಡುವ ಉದ್ದೇಶಕ್ಕೆ ಸುದ್ದಿಗೋಷ್ಠಿ ಕರೆದಿದ್ದರು.

ಆದರೆ ಇದೇ ಸಮುದಾಯ ಮತ್ತೊಂದು ಗುಂಪಿನವರು ಅಡ್ಡಿಪಡಿಸುವ ಸಾಧ್ಯತೆ ಇದೆ ಎಂಬ ಹಿನ್ನೆಲೆಯಲ್ಲಿ ಪೊಲೀಸರ ಮೊರೆ ಹೋದ ಸಂಘಟಕರು, ರಕ್ಷಣೆ ನೀಡುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು. ಪೊಲೀಸ್​ ಭದ್ರತೆ ನಡುವೆ ಸುದ್ದಿಗೋಷ್ಠಿ ನಡೆಯಿತು.

ABOUT THE AUTHOR

...view details