ಕರ್ನಾಟಕ

karnataka

ETV Bharat / state

ತಹಶಿಲ್ದಾರ್ ಕಚೇರಿಯಲ್ಲಿದ್ದ ಮರಳು ರಾತ್ರೋರಾತ್ರಿ ಕಳ್ಳ ಸಾಗಣೆಗೆ ಯತ್ನ - sand mafia in gangavathi

ಗಂಗಾವತಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮರಳನ್ನು ಅಧಿಕಾರಿಗಳು ವಶಪಡಿಸಿಕೊಂಡು, ಸರ್ಕಾರಿ ಕಚೇರಿಯೊಂದರ ಆವರಣದಲ್ಲಿ ಇಟ್ಟಿದ್ದರು. ಇದನ್ನು ರಾತ್ರೋರಾತ್ರಿ ಕಳ್ಳರು ಕದ್ದು ಸಾಗಿಸುತ್ತಿದ್ದ ಘಟನೆ ಬೆಳಕಿಗೆ ಬಂದಿದೆ.

ಟ್ರಾಕ್ಟರ್ ಬಿಟ್ಟು ಪರಾರಿ
ಟ್ರಾಕ್ಟರ್ ಬಿಟ್ಟು ಪರಾರಿ

By

Published : Dec 30, 2019, 7:27 AM IST

ಗಂಗಾವತಿ: ಅಕ್ರಮವಾಗಿ ಸಾಗಿಸುತ್ತಿದ್ದ ಮರಳನ್ನು ವಶಪಡಿಸಿಕೊಳ್ಳಲಾಗಿತ್ತು. ಬಳಿಕ ತಹಶಿಲ್ದಾರ್​ ಕಚೇರಿ ಆವರಣದಲ್ಲಿ ಇದನ್ನು ಸಂಗ್ರಹಿಸಿಡಲಾಗಿತ್ತು. ಈ ಮರಳನ್ನು ಖದೀಮರು ರಾತ್ರೋರಾತ್ರಿ ಕದ್ದು ಸಾಗಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಇದರ ಹಿಂದೆ ಕಚೇರಿಯ ಸಿಬ್ಬಂದಿ ಕೈವಾಡದ ಶಂಕೆ ವ್ಯಕ್ತವಾಗಿದೆ.

ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ ಮರಳು ವಾಹನಗಳ ಮೇಲೆ ದಾಳಿ ಮಾಡಿದ್ದ ಕಂದಾಯ ಅಧಿಕಾರಿಗಳು, ತಹಶಿಲ್ದಾರ್ ಕಚೇರಿ ಆವರಣದಲ್ಲಿ ಸಂಗ್ರಹಿಸಿಟ್ಟಿದ್ದರು. ಆದ್ರೆ ಕಳ್ಳರು ರಾತ್ರೋರಾತ್ರಿ ಕಚೇರಿಗೆ ನುಗ್ಗಿ ಆವರಣದಲ್ಲಿದ್ದ ಮರಳನ್ನು ಸಾಗಿಸುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಕಳ್ಳರು ಟ್ರಾಕ್ಟರ್ ಅನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.

ತಹಶಿಲ್ದಾರ್ ಕಚೇರಿ ಆವರಣದಲ್ಲಿ ಮರಳು ಕಳ್ಳ ಸಾಗಣೆಗೆ ಯತ್ನ

ಇನ್ನು, ಸರ್ಕಾರಿ ಕಚೇರಿಗೆ ನುಗ್ಗಿ ಕಳ್ಳತನ ಮಾಡಿರುವುದು ಅಲ್ಲಿನ ಸಿಬ್ಬಂದಿ ಮೇಲೆ ಅನುಮಾನ ಪಡುವಂತಾಗಿದೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.

ABOUT THE AUTHOR

...view details