ಕರ್ನಾಟಕ

karnataka

ETV Bharat / state

ಸೇನೆಯಿಂದ ನಿವೃತ್ತಿಯಾಗಿ ಸ್ವಗ್ರಾಮಕ್ಕೆ ಮರಳಿದ ಯೋಧನಿಗೆ ಹೃದಯಸ್ಪರ್ಶಿ ಸ್ವಾಗತ - Gururaja deshapande welcome programme

ಕೊಪ್ಪಳ ತಾಲೂಕಿನ ಹೊಸಳ್ಳಿ ಗ್ರಾಮದವರಾದ ಯೋಧ ಗುರುರಾಜ ದೇಶಪಾಂಡೆ ಅವರು ಕಳೆದ 24 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಹೊಂದಿದ್ದಾರೆ. ಇಂದು ಸ್ವಗ್ರಾಮಕ್ಕೆ ತೆರಳಿದಾಗ ಅವರಿಗೆ ಕುಟುಂಬಸ್ಥರು ಪುಷ್ಪವೃಷ್ಠಿ ಮೂಲಕ ಅದ್ದೂರಿ ಸ್ವಾಗತ ಕೋರಿದರು.

retired-soldier-welcomed-by-his-family-members-in-koppala
ಯೋಧನಿಗೆ ಕುಟುಂಬಸ್ಥರಿಂದ ಅದ್ದೂರಿ ಸ್ವಾಗತ

By

Published : Jul 5, 2021, 6:13 PM IST

ಕೊಪ್ಪಳ:ತಾಲೂಕಿನ ಹುಲಗಿ ರೈಲ್ವೆ ನಿಲ್ದಾಣದಲ್ಲಿಸೇನೆಯಿಂದ ಸೇವಾ ನಿವೃತ್ತಿಯಾಗಿ ಮರಳಿದ ಯೋಧ ಗುರುರಾಜ ದೇಶಪಾಂಡೆ ಅವರಿಗೆ ಕುಟುಂಬಸ್ಥರು ಹೃದಯಸ್ಪರ್ಶಿ ಸ್ವಾಗತ ಕೋರಿದರು.

ಸೇನೆಯಿಂದ ನಿವೃತ್ತಿಯಾಗಿ ಸ್ವಗ್ರಾಮಕ್ಕೆ ಮರಳಿದ ಯೋಧನಿಗೆ ಕುಟುಂಬಸ್ಥರಿಂದ ಅದ್ದೂರಿ ಸ್ವಾಗತ

ತಾಲೂಕಿನ ಹೊಸಳ್ಳಿ ಗ್ರಾಮದವರಾದ ಗುರುರಾಜ ದೇಶಪಾಂಡೆ ಕಳೆದ 24 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಸೇನೆಯಲ್ಲಿ ನಾಯಕ್ ಸುಬೇದಾರ್ ಆಗಿದ್ದ ಇವರು, 1997 ರಲ್ಲಿ ಮರಾಠ ರೆಜಿಮೆಂಟ್​ಗೆ ಸೇರ್ಪಡೆಯಾಗಿ ಜಮ್ಮು ಕಾಶ್ಮೀರ, ಪಂಜಾಬ್, ಲೇಹ್ ಲಡಾಕ್, ಹಿಮಾಚಲ ಪ್ರದೇಶ, ಅರುಣಾಚಲ ಪ್ರದೇಶ ಸೇರಿದಂತೆ ವಿವಿಧೆಡೆ ಸೇವೆ ಸಲ್ಲಿಸಿದ್ದಾರೆ‌.

ಇದನ್ನೂ ಓದಿ:ದ್ವಿತೀಯ ಪಿಯುಸಿ ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಇಲ್ಲದೇ ಪಾಸ್

ABOUT THE AUTHOR

...view details