ಕರ್ನಾಟಕ

karnataka

ETV Bharat / state

'ಪಂಚಮಸಾಲಿ ಸಮಾಜಕ್ಕೆ ಮಂತ್ರಿಗಿರಿಗಿಂತ ಮೀಸಲಾತಿ ಮುಖ್ಯ' - ಪಂಚಮಸಾಲಿ ಸಮಾಜದ 2ಎ ವರ್ಗದಡಿ ಮೀಸಲಾತಿ ಕಲ್ಪಿಸುವ‌ಂತೆ ಮನವಿ

ಇಡೀ ಸಮುದಾಯದ ಮುಖಂಡರು ಒಂದು ದಿನದ ಉಪವಾಸ ಮಾಡುವ ಮೂಲಕ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ವರ್ಗ ಮೀಸಲಾತಿಗೆ ಬೇಡಿಕೆ ಇಡಲಾಗುವುದು ಎಂದು ತಿಳಿಸಿದರು.

Request for reservation Under 2A Category of the Panchamasali society
ನಮ್ಮ ಪಂಚಮಸಾಲಿ ಸಮಾಜಕ್ಕೆ ಮಂತ್ರಿಗಿರಿಗಿಂತ ಮೀಸಲಾತಿ ಮುಖ್ಯ

By

Published : Oct 20, 2020, 11:36 AM IST

ಗಂಗಾವತಿ: ನಮ್ಮ ಸಮಾಜದವರಿಗೆ ಮಂತ್ರಿಗಿರಿ, ಉಪ ಮುಖ್ಯಮಂತ್ರಿ ಅಥವಾ ಸಿಎಂ ಮಾಡಿ ಎಂದು ನಾವು ಕೇಳುವುದಿಲ್ಲ. ನಮ್ಮ ಬೇಡಿಕೆ ಏನಿದ್ದರೂ ಸಮಾಜವನ್ನು 2ಎಗೆ ಸೇರಿಸಿ, ಹಿಂದುಳಿದ ವರ್ಗದಲ್ಲಿ ಬರುವ ಮೀಸಲಾತಿಗಳನ್ನು ನೀಡಬೇಕು ಎಂಬುದಷ್ಟೇ ಆಗಿದೆ ಎಂದು ಪಂಚಮಸಾಲಿ ಸಮಾಜದ ಮುಖಂಡರು ಹೇಳಿದರು.

'ನಮ್ಮ ಪಂಚಮಸಾಲಿ ಸಮಾಜಕ್ಕೆ ಮಂತ್ರಿಗಿರಿಗಿಂತ ಮೀಸಲಾತಿ ಮುಖ್ಯ'

ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಗಂಗಾವತಿ ತಾಲೂಕು ಘಟಕದ ನೇತೃತ್ವದಲ್ಲಿ ನಗರದಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಮುಖಂಡ ಸುರೇಶ ಗೌರಪ್ಪ, ನಮ್ಮ ಸಮಾಜದ ಜಯಮೃತ್ಯುಂಜಯ ಸ್ವಾಮೀಜಿ ಮಂತ್ರಿಗಿರಿಗೆ ಬೇಡಿಕೆ ಇಟ್ಟಿದ್ದಾರೆ. ಅದು ಅವರ ವೈಯಕ್ತಿಕ ಅಭಿಪ್ರಾಯ. ಇದಕ್ಕೆ ನಮ್ಮ ಸಹಮತವೂ ಇಲ್ಲ, ವಿರೋಧವೂ ಇಲ್ಲ. ಆದರೆ, ನಮ್ಮನ್ನು 2ಎ ವರ್ಗಕ್ಕೆ ಸೇರಿಸಬೇಕು ಎಂಬ ಉದ್ದೇಶ ಇರಿಸಿಕೊಂಡು ಅ.28ರಂದು ಬೆಳಗಾವಿಯ ಸುವರ್ಣಸೌಧದಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ಅಂದು ಇಡೀ ಸಮುದಾಯದ ಮುಖಂಡರು ಒಂದು ದಿನದ ಉಪವಾಸ ಮಾಡುವ ಮೂಲಕ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ವರ್ಗ ಮೀಸಲಾಯಿತಿಗೆ ಬೇಡಿಕೆ ಇಡುತ್ತಿದ್ದೇವೆ ಎಂದು ಹೇಳಿದರು.

ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಶ ಗೌಡ, ತಾಲೂಕು ಅಧ್ಯಕ್ಷ ಬಸವರಾಜ ರಮತ್ನಾಳ್ ಮತ್ತಿತರು ಉಪಸ್ಥಿತರಿದ್ದರು.

For All Latest Updates

TAGGED:

ABOUT THE AUTHOR

...view details