ಕರ್ನಾಟಕ

karnataka

ETV Bharat / state

ದೆಹಲಿಗೆ ತೆರಳಿದ್ದ ಎಲ್ಲಾ 33 ಮಂದಿಯ ವರದಿ ನೆಗೆಟಿವ್‌.. ನಿಟ್ಟುಸಿರುಬಿಟ್ಟಿತು ಕೊಪ್ಪಳ.. - Koppal News

ಏಪ್ರಿಲ್ 4 ರಂದು 13 ಜನರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಈಗ ಅವರ ಲ್ಯಾಬ್ ರಿಪೋರ್ಟ್ ಸಹ ನೆಗಟಿವ್ ಎಂದು ಬಂದಿದೆ.

Report of 13 people who went to Delhi was negative
ಕೊಪ್ಪಳದಿಂದ ದೆಹಲಿಗೆ ತೆರಳಿದ್ದ 13 ಜನರ ವರದಿ ನೆಗೆಟಿವ್​

By

Published : Apr 6, 2020, 7:55 PM IST

ಕೊಪ್ಪಳ:ನಿಜಾಮುದ್ದೀನ್‌ಗೆ ತೆರಳಿತಬ್ಲಿಘಿ ಜಮಾತ್​ನಲ್ಲಿ ಪಾಲ್ಗೊಂಡು ವಾಪಸ್ ಆಗಿದ್ದ 13 ಜನರ ಲ್ಯಾಬ್ ರಿಪೋರ್ಟ್ ಇವತ್ತು ನೆಗಟಿವ್ ಎಂದು ಬಂದಿದೆ.

ಈ ಕುರಿತಂತೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್, ಜಿಲ್ಲೆಯಿಂದ ಒಟ್ಟು 33 ಜನ ದೆಹಲಿಗೆ ಹೋಗಿ ಬಂದವರಿದ್ದರು. ಈ ಪೈಕಿ 23 ಜನ ತಬ್ಲಿಘಿ ಜಮಾತ್​ನಲ್ಲಿ ಪಾಲ್ಗೊಂಡಿದ್ದರು. ಈ 33 ಜನರಲ್ಲಿ ಮೊದಲಿಗೆ 20 ಜನರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಆ 20 ಜನರ ಲ್ಯಾಬ್ ರಿಪೋರ್ಟ್ ನೆಗಟಿವ್ ಬಂದಿತ್ತು.

ಮತ್ತೆ ಏಪ್ರಿಲ್ 4 ರಂದು 13 ಜನರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಈಗ ಅವರ ಲ್ಯಾಬ್ ರಿಪೋರ್ಟ್ ಸಹ ನೆಗಟಿವ್ ಎಂದು ಬಂದಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details