ಕರ್ನಾಟಕ

karnataka

ಒಂದು ಸಾವಿರ ಜನರಿಗೆ ದಿನಸಿ ಕಿಟ್ ವಿತರಿಸಿದ ರಾಘವೇಂದ್ರ ಹಿಟ್ನಾಳ್

ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಕೊಪ್ಪಳದ ಭಾಗ್ಯನಗರದ ಬಾಲಾಜಿ ಫಂಕ್ಷನ್ ಹಾಲ್‌ನಲ್ಲಿ ಸುಮಾರು ಒಂದು ಸಾವಿರ ಜನರಿಗೆ ದಿನಸಿ ಕಿಟ್ ವಿತರಣೆ ಮಾಡಿದ್ರು. ಅಲ್ಲದೆ ಸರ್ಕಾರದ ಸೂಚನೆಯಂತೆ ಮೇ 3ರವರೆಗೆ ಲಾಕ್​ಡೌನ್‌ ಮುಂದುವರೆಸಲು ಜನರು ಸಹಕರಿಸಬೇಕು ಎಂದು‌ ಮನವಿ ಮಾಡಿದ್ದಾರೆ.

By

Published : Apr 25, 2020, 5:04 PM IST

Published : Apr 25, 2020, 5:04 PM IST

Raghavendra hitnal gave ration kit in koppal
ಒಂದು ಸಾವಿರ ಜನರಿಗೆ ರೇಷನ್ ಕಿಟ್ ವಿತರಿಸಿದ ರಾಘವೇಂದ್ರ ಹಿಟ್ನಾಳ್

ಕೊಪ್ಪಳ:ಕೊರೊನಾ ಭೀತಿಯಿಂದಾಗಿ ಲಾಕ್​ಡೌನ್​ ಮಾಡಲಾಗಿದ್ದು, ಎಲ್ಲರಿಗೂ ತೊಂದರೆಯಾಗಿದೆ. ಆದರೂ ಪರವಾಗಿಲ್ಲ. ಸರ್ಕಾರದ ಸೂಚನೆಯಂತೆ ಮೇ 3ರವರೆಗೆ ಲಾಕ್​ಡೌನ್‌ ಮುಂದುವರೆಸಲು ಜನರು ಸಹಕರಿಸಬೇಕು ಎಂದು‌ ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಮನವಿ ಮಾಡಿದ್ದಾರೆ.

ಒಂದು ಸಾವಿರ ಜನರಿಗೆ ದಿನಸಿ ಕಿಟ್ ವಿತರಿಸಿದ ರಾಘವೇಂದ್ರ ಹಿಟ್ನಾಳ್

ಅಲ್ಲದೆ ಜಿಲ್ಲಾಧಿಕಾರಿ, ಎಲ್ಲಾ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರ ಸಹಕಾರದಿಂದ ಜಿಲ್ಲೆಯಲ್ಲಿ ಯಾವುದೇ ಪಾಸಿಟಿವ್ ಪ್ರಕರಣವಿಲ್ಲ. ಆದರೆ, ಜಿಲ್ಲೆಯ ಸುತ್ತ ಇರುವ ಗದಗ, ಬಾಗಲಕೋಟೆ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣ ಇರುವುದರಿಂದ ಲಾಕ್​ಡೌನ್ ಹೀಗೆಯೇ ಮುಂದುವರೆಯಬೇಕು. ಇದರಿಂದ ನಮ್ಮ ಜಿಲ್ಲೆಗೆ ಅನುಕೂಲವಾಗಲಿದೆ. ನಾನು ಸಹ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದೇನೆ.‌ ಲಾಕ್​ಡೌನ್​ನಿಂದ ಜನರಿಗೆ ತೊಂದರೆಯಾಗಿದೆ.

ಒಂದು ಸಾವಿರ ಜನರಿಗೆ ದಿನಸಿ ಕಿಟ್ ವಿತರಿಸಿದ ರಾಘವೇಂದ್ರ ಹಿಟ್ನಾಳ್

ಕೇಂದ್ರ ಸರ್ಕಾರದ ಸೂಚನೆಯಂತೆ ಮೇ 3ರವೆರೆಗೆ ಲಾಕ್​ಡೌನ್ ಮುಂದುವರೆಸಿದರೆ ನಮ್ಮ ಜಿಲ್ಲೆಗೂ ಉಪಯುಕ್ತವಾಗಲಿದೆ. ಇದಕ್ಕೆ ಜನರು ಸಹಕಾರ ನೀಡಬೇಕು ಎಂದರು. ಬಳಿಕ ಕೊಪ್ಪಳದ ಭಾಗ್ಯನಗರದ ಬಾಲಾಜಿ ಫಂಕ್ಷನ್ ಹಾಲ್‌ನಲ್ಲಿ ಸುಮಾರು ಒಂದು ಸಾವಿರ ಜನರಿಗೆ ದಿನಸಿ ಕಿಟ್ ವಿತರಣೆ ಮಾಡಿದರು.

ABOUT THE AUTHOR

...view details