ಗಂಗಾವತಿ (ಕೊಪ್ಪಳ):ದೆಹಲಿಯಲ್ಲಿ ನಡೆದ ಗಲಭೆಯಲ್ಲಿ ಸಿಪಿಎಂ ಪಕ್ಷದ ಮುಖಂಡ ಸೀತಾರಾಮ್ ಯೆಚೂರಿ ಅವರ ಹೆಸರನ್ನು ಸೇರ್ಪಡೆ ಮಾಡಿರುವುದನ್ನು ವಿರೋಧಿಸಿ ನಗರದಲ್ಲಿ ಪಕ್ಷದಿಂದ ಪ್ರತಿಭಟನೆ ನಡೆಸಲಾಯಿತು.
ಗಂಗಾವತಿ: ದೆಹಲಿ ಗಲಭೆಯಲ್ಲಿ ಸೀತಾರಾಮ್ ಯೆಚೂರಿ ಹೆಸರು ಸೇರ್ಪಡೆಗೆ ವಿರೋಧ - ದೆಹಲಿ ಗಲಭೆ
ಹೋರಾಟದ ಮುಂಚೂಣಿಯಲ್ಲಿರುವ ನಾಯಕರ ಮೇಲೆ ಕೇಸ್ ಹಾಕಿ, ಜೈಲಿಗೆ ಕಳಿಸುವ ಮೂಲಕ ಕೇಂದ್ರ ಸರ್ಕಾರ ಚಳವಳಿಗಳನ್ನು ಹತ್ತಿಕ್ಕುವ ದುಷ್ಕೃತ್ಯಕ್ಕೆ ಕೈ ಹಾಕಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಇಲ್ಲಿನ ಶ್ರೀಕೃಷ್ಣ ದೇವರಾಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಧರಣಿಕಾರರು, ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಟದ ಮುಂಚೂಣಿಯಲ್ಲಿರುವ ನಾಯಕರ ಮೇಲೆ ಕೇಸುಗಳನ್ನು ಹಾಕಿ, ಜೈಲಿಗೆ ಕಳಿಸುವ ಮೂಲಕ ಕೇಂದ್ರ ಸರ್ಕಾರ ಚಳುವಳಿಗಳನ್ನು ಹತ್ತಿಕ್ಕುವ ದುಷ್ಕೃತ್ಯಕ್ಕೆ ಕೈ ಹಾಕಿದೆ ಎಂದರು.
ಸಿಎಎ ಮತ್ತು ಎನ್ಆರ್ಸಿ ವಿರುದ್ಧ ನಡೆದ ಹೋರಾಟದಲ್ಲಿ ಪಾಲ್ಗೊಂಡವರ ಮೇಲೆ, ಈಶಾನ್ಯ ದೆಹಲಿಯಲ್ಲಿ ನಡೆದ ಭೀಷಣ ಕೋಮು ಗಲಭೆ ಹೆಸರಲ್ಲಿ ಸುಳ್ಳು ಆರೋಪದಡಿ ಕೇಸ್ ದಾಖಲಿಸಲಾಗುತ್ತಿದ್ದು, ಕೇಂದ್ರ ಸರ್ಕಾರ ಪ್ರಜಾಪ್ರಭುತ್ವವನ್ನು ಹೋರಾಟಕಾರರ ಮೇಲೆ ಹಾಕುತ್ತಿರುವ ಪ್ರಕರಣಗಳನ್ನು ಕೈಬಿಡಬೇಕು ಎಂದು ಧರಣಿಕಾರರು ಆಗ್ರಹಿಸಿದರು.