ಕರ್ನಾಟಕ

karnataka

ETV Bharat / state

ರಾಜಕೀಯ ಮೇಲಾಟ: ಪಿಡಿಒಗಳ ವರ್ಗಾವಣೆ

ಕನಕಗಿರಿಯ ಐದು ಜನ ಮತ್ತು ಗಂಗಾವತಿಯ ಇಬ್ಬರು ಪಿಡಿಒಗಳನ್ನು ವರ್ಗಾವಣೆ ಮಾಡಿರುವ ಜಿಲ್ಲಾ ಪಂಚಾಯತ್ ಸಿಇಒ.

By

Published : Oct 10, 2019, 11:27 AM IST

Updated : Oct 10, 2019, 12:46 PM IST

koppala gp

ಗಂಗಾವತಿ (ಕೊಪ್ಪಳ) :ಕನಕಗಿರಿ ಕ್ಷೇತ್ರದಲ್ಲಿ ರಾಜಕೀಯ ಮೇಲಾಟಕ್ಕೆ ಪಿಡಿಒಗಳ ವರ್ಗಾವಣೆ ನಡೆಯುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರಾಗಿರುವವರು ಪಂಚಾಯಿತಿ ಸದಸ್ಯರಾಗಿರುವ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳ ನಡುವಣ ಕಲಹಕ್ಕೆ ಪಿಡಿಒಗಳು ಬಲಿಯಾಗುತ್ತಿದ್ದು, ವರ್ಗಾವಣೆಯಿಂದ ಇವರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಕೊಪ್ಪಳ ಗ್ರಾಮ ಪಂಚಾಯ್ತಿ

ಈ ಬಗ್ಗೆ ಹಣವಾಳ ಗ್ರಾಮ ಪಂಚಾಯಿತಿ ಪಿಡಿಒ ನೀಲಾ ಸೂರ್ಯಕುಮಾರಿಯನ್ನು ಬದಲಾಯಿಸುವಂತೆ ಸ್ವತಃ ಕನಕಗಿರಿ ಶಾಸಕ ಬಸವರಾಜ ದಢೇಸುಗೂರು ಒಂದು ತಿಂಗಳ ಹಿಂದೆ ತಾಲೂಕು ಪಂಚಾಯಿತಿಯ ಸಿಇಒ ತಿಮ್ಮಾನಾಯ್ಕ್ ಅವರಿಗೆ ಸೂಚನೆ ನೀಡಿದ್ದರು.

ಆದರೆ, ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಂದ ಬಳಿಕ ಅಲ್ಪಕಾಲ ಪಿಡಿಒಗಳ ವರ್ಗಾವಣೆ ರದ್ದಾಗಿತ್ತು. ಆದರೆ, ಈಗ ಮತ್ತೆ ಕನಕಗಿರಿಯ ಐದು ಜನ ಮತ್ತು ಗಂಗಾವತಿಯ ಇಬ್ಬರು ಪಿಡಿಒಗಳನ್ನು ವರ್ಗಾವಣೆ ಮಾಡಿರುವುದು ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದೆ.

Last Updated : Oct 10, 2019, 12:46 PM IST

ABOUT THE AUTHOR

...view details