ಕರ್ನಾಟಕ

karnataka

ETV Bharat / state

ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆ ಮೇಲೆ ಪೊಲೀಸರ ದಾಳಿ: ಮೂವರು ವಶಕ್ಕೆ - ಗಂಗಾವತಿ ನಗರ ಠಾಣೆ ಪೊಲೀಸರು

ಜನವಸತಿ ಪ್ರದೇಶದಲ್ಲಿನ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದಾರೆ ಎಂಬ ಸ್ಥಳೀಯರ ದೂರಿನ ಮೇಲೆ ದಾಳಿ ಮಾಡಿದ ಸಂದರ್ಭ ಇಬ್ಬರು ಯುವತಿಯರನ್ನು ರಕ್ಷಿಸಿ, ಮೂವರು ಯುವಕರನ್ನು ಪೊಲೀಸರು ವಶಕ್ಕೆಪಡೆದಿದ್ದಾರೆ.

The police raid the house under the complaint of prostitution
ವೇಶ್ಯಾವಾಟಿಕೆ ದೂರಿನಡಿ ಮನೆ ಮೇಲೆ ಪೊಲೀಸರ ದಾಳಿ

By

Published : Mar 4, 2021, 10:11 PM IST

ಗಂಗಾವತಿ (ಕೊಪ್ಪಳ):ನಗರದ ಜನವಸತಿ ಪ್ರದೇಶದಲ್ಲಿನ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಮಾಹಿತಿ ಹಿನ್ನೆಲೆ ಪೊಲೀಸರು ದಾಳಿ ಮಾಡಿದ್ದು, ಮೂವರು ಯುವಕರನ್ನು ವಶಕ್ಕೆ ಪಡೆದು, ಇಬ್ಬರು ಯುವತಿಯರ ರಕ್ಷಿಸಿದ್ದಾರೆ.

ಬಂಧಿತ ಆರೋಪಿಗಳನ್ನು ವಿಜಯಪುರ ಮೂಲದ ಬಸವರಾಜ್ ವಕ್ಕಲಿಗ, ರಾಯಚೂರು ಜಿಲ್ಲೆಯ ಮಸ್ಕಿಯ ಖಾಸಗಿ ವಾಹನ ಚಾಲಕ ಬಸವರಾಜ ಹಾಗೂ ಖಾಸಗಿ ಕಂಪನಿಯ ಸೇಲ್ಸ್​ಮನ್ ಸುರೇಶ್ ಎಂದು ಗುರುತಿಸಲಾಗಿದೆ.

ವೇಶ್ಯಾವಾಟಿಕೆ ದೂರಿನಡಿ ಮನೆ ಮೇಲೆ ಪೊಲೀಸರ ದಾಳಿ

ಪ್ರಕರಣದಲ್ಲಿ ಸೊಲ್ಲಾಪುರ ಮೂಲದ ಇಬ್ಬರು ಯುವತಿಯರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಹೊಸಳ್ಳಿ ರಸ್ತೆಯಲ್ಲಿರುವ ಎಲ್ವಿಟಿ ಕಾಲೋನಿಯಲ್ಲಿನ ಮನೆಯೊಂದನ್ನು ಕಳೆದ ತಿಂಗಳು ಈ ಆರೋಪಿಗಳು ಬಾಡಿಗೆ ಪಡೆದುಕೊಂಡಿದ್ದರು.

ಬಳಿಕ ವೇಶ್ಯಾವಾಟಿಕೆ ದಂಧೆ ಶುರುಮಾಡಿದ್ದರು ಎನ್ನಲಾಗಿದೆ. ನೆರೆಹೊರೆಯ ನಿವಾಸಿಗಳ ದೂರಿನ ಮೆರೆಗೆ ಪೊಲೀಸರು ದಾಳಿ ಮಾಡಿದ್ದಾರೆ. ಸ್ಥಳಕ್ಕೆ ಡಿವೈಎಸ್​​ಪಿ ರುದ್ರೇಶ್ ಉಜ್ಜನಕೊಪ್ಪ ಹಾಗೂ ನಗರಠಾಣೆಯ ಇನ್ಸ್​ಪೆಕ್ಟರ್ ವೆಂಕಟಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ:ಅನ್ನಭಾಗ್ಯ ಅಕ್ಕಿ ಅಕ್ರಮ ಮಾರಾಟ: ನಗರಸಭಾ ಸದಸ್ಯ ಸೇರಿ ಇಬ್ಬರ ಬಂಧನ

ABOUT THE AUTHOR

...view details