ಕರ್ನಾಟಕ

karnataka

ETV Bharat / state

ಹೆದ್ದಾರಿ ಸೂಚನಾ ಫಲಕ ಅಳವಡಿಸಿ: ಸಾರ್ವಜನಿಕರ ಆಗ್ರಹ - kushtagi, koppal news

ದೋಟಿಹಾಳ ಕ್ರಾಸ್ ಬಳಿ ಇಳಕಲ್ ಮೂಲಕ ವಿವಿಧ ಗ್ರಾಮಗಳಿಂದ ಕುಷ್ಟಗಿ ಪಟ್ಟಣ ಪ್ರವೇಶಿಸಲು ಸುಗಮವಾಗಿ ಹೆದ್ದಾರಿ ಕ್ರಾಸ್ ಮಾಡಲು ಮೇಲ್ಸೇತುವೆಗೆ ಹೊಂದಿಕೊಂಡಿರುವ ಕೆಳ ಸೇತುವೆ ಇದೆ. ಬಹುತೇಕ ಜನರು ಟೆಂಗುಂಟಿ ಕ್ರಾಸ್ ಮೂಲಕ ಹೋಗದೇ ಅಪಾಯಕಾರಿಯಾಗಿ ಶಾರ್ಟ್​ ಕಟ್ ರೂಟ್ ಮೂಲಕ ಹೆದ್ದಾರಿ ಕ್ರಾಸ್ ಮಾಡುತ್ತಿರುವುದು ಕಂಡು ಬಂದಿದೆ.

safety-panel
ದೋಟಿಹಾಳ ಕ್ರಾಸ್​ನಲ್ಲಿ ಸೂಚಬ ಫಲಕಾ ಅಳವಡಿಸಿಲ್ಲ

By

Published : Jul 4, 2020, 3:59 PM IST

ಕುಷ್ಟಗಿ:ಸುವರ್ಣ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ 2 ಕಿ.ಮೀ. ವ್ಯಾಪ್ತಿಯ ದೋಟಿಹಾಳ ಕ್ರಾಸ್ ಹಾಗೂ ಅಗ್ನಿಶಾಮಕ ದಳ ಠಾಣೆಯ ಬಳಿ ಹೆದ್ದಾರಿಗೆ ಸೂಚನಾ ಫಲಕ ಅಳವಡಿಸದೆ ಇರುವುದು ಅಪಘಾತಗಳಿಗೆ ದಾರಿ ಮಾಡಿಕೊಡುತ್ತಿದೆ.

ದೋಟಿಹಾಳ ಕ್ರಾಸ್ ಬಳಿ ಇಳಕಲ್ ಮೂಲಕ ವಿವಿಧ ಗ್ರಾಮಗಳಿಂದ ಕುಷ್ಟಗಿ ಪಟ್ಟಣ ಪ್ರವೇಶಿಸಲು ಸುಗಮವಾಗಿ ಹೆದ್ದಾರಿ ಕ್ರಾಸ್ ಮಾಡಲು ಮೇಲ್ಸೇತುವೆಗೆ ಹೊಂದಿಕೊಂಡಿರುವ ಕೆಳ ಸೇತುವೆ ಇದೆ. ಬಹುತೇಕ ಜನರು ಟೆಂಗುಂಟಿ ಕ್ರಾಸ್ ಮೂಲಕ ಹೋಗದೇ ಅಪಾಯಕಾರಿಯಾಗಿ ಶಾರ್ಟ್​ ಕಟ್ ರೂಟ್ ಮೂಲಕ ಹೆದ್ದಾರಿ ಕ್ರಾಸ್ ಮಾಡುತ್ತಿರುವುದು ಕಂಡು ಬಂದಿದೆ.

ಹೆದ್ದಾರಿ ಕ್ರಾಸ್ ಮಾಡಲು ಬೈಕ್ ಸವಾರರು ಡಿವೈಡರ್ ಒಡೆದು ದಾರಿ ಮಾಡಿಕೊಂಡಿದ್ದಾರೆ. ಅಪಘಾತ ಸಂಭವಿಸಿದ ಹಿನ್ನೆಲೆಯಲ್ಲಿ ಬಂದ್ ಮಾಡಿದ್ದರೂ ಕೂಡ ವಿಭಜಕ ಒಡೆದು ಹೆದ್ದಾರಿ ಕ್ರಾಸ್ ಮಾಡಿ ಅಪಾಯವನ್ನು ಮೈ ಮೇಲೆ ಎಳೆದುಕೊಳ್ಳುತ್ತಿದ್ದಾರೆ.

ದೋಟಿಹಾಳ ಕ್ರಾಸ್​ನಲ್ಲಿ ಸೂಚನಾ ಫಲಕ ಅಳವಡಿಸಲು ಆಗ್ರಹ

ಭಾರತೀಯ ಹೆದ್ದಾರಿ ಪ್ರಾಧಿಕಾರದವರು ಇನ್ನಾದರೂ ಎಚ್ಚೆತ್ತುಕೊಂಡು ಹೆದ್ದಾರಿ ಅಪಘಾತಗಳನ್ನು ತಪ್ಪಿಸಲು ಹೆದ್ದಾರಿ ಸುಚನಾ ಫಲಕ ಅಳವಡಿಸಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.

ABOUT THE AUTHOR

...view details