ಕರ್ನಾಟಕ

karnataka

By

Published : Aug 1, 2019, 11:38 AM IST

ETV Bharat / state

ಆಧಾರ್​ ಕಾರ್ಡ್​ ಪಡೆಯಲು ರಾತ್ರಿಯೇ ಕ್ಯೂನಲ್ಲಿ ನಿಲ್ಲಬೇಕು!

ಕೊಪ್ಪಳ ಜಿಲ್ಲೆಯಲ್ಲಿ ಆಧಾರ್​ ಕಾರ್ಡ್ ​ಮಾಡಿಸೋದಕ್ಕೆ ಟೋಕನ್​ ಪಡೆಯಲು ಜನ ರಾತ್ರಿಯೇ ಬ್ಯಾಂಕ್​ ಮುಂದೆ ಸಾಲುಗಟ್ಟಿ ನಿಂತುಕೊಳ್ಳುತ್ತಿದ್ದಾರೆ.

ಆಧಾರ್​ ಕಾರ್ಡ್​ ಪಡೆಯಲು ಪರದಾಟ

ಕೊಪ್ಪಳ: ಜಿಲ್ಲೆಯಲ್ಲಿ ಆಧಾರ್ ಕಾರ್ಡ್​ನ ಸಮಸ್ಯೆ ಇನ್ನೂ ಬಗೆಹರಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಆಧಾರ್ ಕಾರ್ಡ್​ಗಾಗಿ ಜನರು ನೋಂದಣಿ ಕೇಂದ್ರದ ಮುಂದೆ ಇಡೀ ರಾತ್ರಿ ಕಳೆಯುವಂತಾಗಿದೆ.

ಆಧಾರ್​ ಕಾರ್ಡ್​ ಪಡೆಯಲು ಪರದಾಟ

ಗಂಗಾವತಿ ನಗರದಲ್ಲಿ ಜನರು ಆಧಾರ್ ಕಾರ್ಡ್​ಗಾಗಿ ರಾತ್ರಿ ಇಡೀ ಬ್ಯಾಂಕ್ ಮುಂದೆ ಮಲಗಿಕೊಂಡಿದ್ದರು‌. ನಗರದಲ್ಲಿನ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮುಂದೆ ಆಧಾರ್ ಕಾರ್ಡ್ ಮಾಡಿಸಲು ಗ್ರಾಮೀಣ ಪ್ರದೇಶದಿಂದ ಬಂದಿದ್ದ ಜನರು ಟೋಕನ್ ಪಡೆಯಲು ರಾತ್ರಿಯೇ ಸಾಲಿನಲ್ಲಿ ನಿಂತಿದ್ದರು.

ರಾತ್ರಿ ಕ್ಯೂ ನಿಂತರೆ ಮಾತ್ರ ಟೋಕನ್ ಸಿಗುತ್ತವೆ. ವಾರಕ್ಕೆ ಕೇವಲ ನೂರು ಜನರಿಗೆ ಮಾತ್ರ ಆಧಾರ್ ಕಾರ್ಡ್ ಮಾಡಲಾಗುತ್ತದೆ. ಇದರಿಂದಾಗಿ ಟೋಕನ್ ಪಡೆಯಲು ಇಡೀ ರಾತ್ರಿ ಕಾಯಬೇಕು. ಈ ಸಮಸ್ಯೆಯನ್ನು ತಹಸೀಲ್ದಾರ್​ ಗಮನಕ್ಕೆ ತಂದರೂ ಪರಿಹಾರವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details