ಕರ್ನಾಟಕ

karnataka

ETV Bharat / state

ಕುಷ್ಟಗಿಯಲ್ಲಿ ಜೋಡಿ ಕರಡಿಗಳು ಪ್ರತ್ಯಕ್ಷ: ಜನರಲ್ಲಿ ಹೆಚ್ಚಿದ ಆತಂಕ - Koppal

ಕುಷ್ಟಗಿ ತಾಲೂಕಿನ ಹೊನಗಡ್ಡಿ ಗ್ರಾಮದ ರಾಮಪ್ಪ ಮ್ಯಾದನೇರಿ ಎಂಬುವರ ಹೊಲದಲ್ಲಿ ಎರಡು ಕರಡಿಗಳು ಪ್ರತ್ಯಕ್ಷವಾಗಿವೆ.

Koppal
ಹೊನಗಡ್ಡಿ ಗ್ರಾಮದಲ್ಲಿ ಪತ್ತೆಯಾದ ಜೋಡಿ ಕರಡಿ

By

Published : Jun 27, 2021, 9:08 AM IST

ಕೊಪ್ಪಳ: ರೈತರೊಬ್ಬರ ಹೊಲದಲ್ಲಿ ಎರಡು ಕರಡಿಗಳು ಪ್ರತ್ಯಕ್ಷವಾಗಿದ್ದು, ಸ್ಥಳದಲ್ಲಿದ್ದವರುವವರು ದೃಶ್ಯವನ್ನು ತಮ್ಮ ಮೊಬೈಲ್​​ನಲ್ಲಿ ಸೆರೆ ಹಿಡಿದಿದ್ದಾರೆ. ಕುಷ್ಟಗಿ ತಾಲೂಕಿನ ಹೊನಗಡ್ಡಿ ಗ್ರಾಮದ ರಾಮಪ್ಪ ಮ್ಯಾದನೇರಿ ಎಂಬುವರ ಹೊಲದಲ್ಲಿ ಎರಡು ಕರಡಿಗಳು ಪ್ರತ್ಯಕ್ಷವಾಗಿವೆ.

ಜೋಡಿ ಕರಡಿಗಳನ್ನು ನೋಡಿದ ರೈತರು ಜೋರಾಗಿ ಕೂಗಾಡಿದ್ದಾರೆ‌. ರೈತರ ಕೂಗಾಟದಿಂದ ಕರಡಿಗಳು ಬೆದರಿ ಸ್ಥಳದಿಂದ ಕಾಲ್ಕಿತ್ತಿವೆ ಎಂದು ತಿಳಿದುಬಂದಿದೆ. ಹಗಲು ಹೊತ್ತಿನಲ್ಲಿಯೇ ಕರಡಿಗಳು ಜಮೀನಿನಲ್ಲಿ ಪ್ರತ್ಯಕ್ಷವಾಗಿರುವುದನ್ನು ಕಂಡು ರೈತರು ಆತಂಕಗೊಂಡಿದ್ದಾರೆ.

ಇದನ್ನೂ ಓದಿ:ಮುಂಗಾರು ಮಳೆಗೆ ಮಸ್ಕಿ ಜಲಾವೃತ.. ವರುಣನ ಆರ್ಭಟಕ್ಕೆ ನಲುಗಿದ ಜನ

ABOUT THE AUTHOR

...view details