ಕರ್ನಾಟಕ

karnataka

ETV Bharat / state

ತಿಂಗಳಿಗೊಮ್ಮೆ ಬಂದು ಹೋಗುವ ಸಚಿವರು ನಮ್ಮ ಜಿಲ್ಲೆಗೆ ಬೇಡ: ಶಾಸಕ ಅಮರೇಗೌಡ - Amaregauda Patil's statement on CM Basavaraja Bommai

ಸಿಎಂ ಬಸವರಾಜ ಬೊಮ್ಮಾಯಿ ಉತ್ತಮ ಆಡಳಿತ ನೀಡುತ್ತಾರೆ ಎಂಬ ನಿರೀಕ್ಷೆ ಇದೆ ಎಂದು ಕುಷ್ಟಗಿ ಕ್ಷೇತ್ರದ ಶಾಸಕ ಅಮರೇಗೌಡ ಪಾಟೀಲ್ ಭಯ್ಯಾಪುರ ತಿಳಿಸಿದ್ದಾರೆ. ಇದೇ ವೇಳೆ ತಮ್ಮ ಜಿಲ್ಲೆಗೆ ತಿಂಗಳಿಗೊಮ್ಮೆ ಬಂದು ಹೋಗುವಂತ ಸಚಿವರು ಉಸ್ತುವಾರಿಯಾಗಿ ಬರುವುದು ಬೇಡ ಎಂದಿದ್ದಾರೆ.

Amaregauda Patil Bhaiyapura
ಶಾಸಕ ಅಮರೇಗೌಡ ಪಾಟೀಲ್ ಭಯ್ಯಾಪುರ

By

Published : Aug 2, 2021, 3:49 PM IST

ಕೊಪ್ಪಳ:ಬೆಂಗಳೂರಿನಲ್ಲಿದ್ದು ತಿಂಗಳಿಗೊಮ್ಮೆ ಬಂದು ಹೋಗುವ ಸಚಿವರು ನಮ್ಮ ಜಿಲ್ಲೆಗೆ ಬೇಡ. ಜಿಲ್ಲೆಗೆ ಸಚಿವ ಸ್ಥಾನ ನೀಡಬೇಕು ಎಂದು ಕುಷ್ಟಗಿ ಕ್ಷೇತ್ರದ ಶಾಸಕ ಅಮರೇಗೌಡ ಪಾಟೀಲ್ ಭಯ್ಯಾಪುರ ಆಗ್ರಹಿಸಿದ್ದಾರೆ.

ಶಾಸಕ ಅಮರೇಗೌಡ ಪಾಟೀಲ್ ಭಯ್ಯಾಪುರ

ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಅವರ ಪಕ್ಷದ ಮೂವರು ಶಾಸಕರು ಇದ್ದಾರೆ. ಆ ಮೂವರಲ್ಲಿ ಯಾರನ್ನಾದರೂ ಸಚಿವರನ್ನಾಗಿ ಮಾಡಲಿ. ಜಿಲ್ಲೆಯ ಅಭಿವೃದ್ಧಿಗಾಗಿ ಸಚಿವರು ಬೇಕು‌. ಸಿಎಂ ಬಸವರಾಜ ಬೊಮ್ಮಾಯಿ ಉತ್ತಮ ಆಡಳಿತ ನೀಡುತ್ತಾರೆ ಎಂಬ ನಿರೀಕ್ಷೆ ಇದೆ ಎಂದರು.

ಈಗಾಗಲೇ ತಮ್ಮ ಕಚೇರಿಯಲ್ಲಿಯ ಸಿಬ್ಬಂದಿ ಬದಲಾಯಿಸಿದ್ದಾರೆ‌‌. ಸಹಜವಾಗಿ ಯಡಿಯೂರಪ್ಪ ಪ್ರಭಾವ ಅವರ ಮೇಲೆ ಆಗಬಹುದು. ಆದರೂ ಸಹ ನಾವು ಸಿಎಂ ಬೊಮ್ಮಾಯಿ ಅವರಿಂದ‌ ಉತ್ತಮ ಆಡಳಿತ ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎಂದು ಹೇಳಿದರು.

ಓದಿ:ಸಂಪುಟ ರಚನೆ ಸರ್ಕಸ್: ದಿಲ್ಲಿಯಲ್ಲಿ ಬಿ ಎಲ್​ ಸಂತೋಷ್ ಜೊತೆ ಬೊಮ್ಮಾಯಿ ಮಾತುಕತೆ

ABOUT THE AUTHOR

...view details