ಕರ್ನಾಟಕ

karnataka

ETV Bharat / state

ಹನುಮ ಮಾಲಾಧಾರಿಗಳಿಗೆ ಫಲ-ಪುಷ್ಪ ನೀಡಲು ಅವಕಾಶ ಕೋರಿ ಎಸ್​ಪಿಗೆ ಮುಸ್ಲೀಮ್​ ಬಾಂಧವರಿಂದ ಮನವಿ - ಹನುಮ ಜಯಂತಿ, ಸಂಕೀರ್ತನಾ ಯಾತ್ರೆ

ಡಿ.9ರಂದು ನಡೆಯಲಿರುವ ಹನುಮ ಜಯಂತಿ ಅಂಗವಾಗಿ ನಗರದಲ್ಲಿ ನಡೆಯುವ ಸಂಕೀರ್ತನಾ ಯಾತ್ರೆಯಲ್ಲಿ ಪಾಲ್ಗೊಳ್ಳುವ ಹನುಮ ಮಾಲಾಧಾರಿಗಳಿಗೆ ಫಲ-ಪುಷ್ಪ ನೀಡಲು ಅವಕಾಶ ನೀಡಬೇಕು ಎಂದು ಮುಸ್ಲಿಂ ಸಮುದಾಯದ ಮುಖಂಡರು ಆಪೇಕ್ಷೆ ವ್ಯಕ್ತಪಡಿಸಿದ್ದಾರೆ.

hanuman-jayanti
hanuman-jayanti

By

Published : Dec 7, 2019, 4:44 AM IST

ಗಂಗಾವತಿ: ಡಿ.9ರಂದು ನಡೆಯಲಿರುವ ಹನುಮ ಜಯಂತಿ ಅಂಗವಾಗಿ ನಗರದಲ್ಲಿ ಸಂಕೀರ್ತನಾ ಯಾತ್ರೆಯಲ್ಲಿ ಪಾಲ್ಗೊಳ್ಳುವ ಹನುಮ ಮಾಲಾಧಾರಿಗಳಿಗೆ ಫಲ-ಪುಷ್ಪ ನೀಡಲು ಅವಕಾಶ ನೀಡಬೇಕು ಎಂದು ಮುಸ್ಲಿಂ ಸಮುದಾಯದ ಮುಖಂಡರು ಆಪೇಕ್ಷೆ ವ್ಯಕ್ತಪಡಿಸಿದ್ದಾರೆ.

ಎಸ್​ಪಿಗೆ ಮುಸ್ಲೀಮ್​ ಬಾಂಧವರಿಂದ ಮನವಿ

ಕೊಪ್ಪಳ ಜಿಲ್ಲಾ ಎಸ್ಪಿ ಸಂಗೀತಾ ಅವರನ್ನು ಭೇಟಿ ಮಾಡಿದ ನಗರದ ಜುಮ್ಮಾ ಮಸೀದಿ ಅಧ್ಯಕ್ಷ ನವಾಬ್ ಸಾಬ್ ನೇತೃತ್ವದಲ್ಲಿನ ಮುಸ್ಲಿಂ ಮುಖಂಡರು, ಹನುಮನ ಭಕ್ತರಿಗೆ ನಮ್ಮ ಸಮುದಾಯದಿಂದ ಹಣ್ಣು-ಹೂವು ನೀಡಲು ಅವಕಾಶ ನೀಡಬೇಕು ಎಂದು ಕೇಳಿಕೊಂಡಿದ್ದಾರೆ.

ಸಂಕೀರ್ತನಾ ಯಾತ್ರೆ ನಡೆಸುವ ಸಂದರ್ಭದಲ್ಲಿ ಭಕ್ತರಿಗೆ ಮತ್ತು ಮೆರವಣಿಗೆಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಿಕೊಳ್ಳುತ್ತೇವೆ. ಈ ಮೂಲಕ ಸೌಹಾರ್ದ ಕಾಪಾಡುತ್ತೇವೆ ಎಂದು ಮುಸ್ಲಿಂ ಸಮುದಾಯದ ಮುಖಂಡರು ಮನವಿ ಮಾಡಿದರು.

ABOUT THE AUTHOR

...view details