ಗಂಗಾವತಿ: ವಿಘ್ನ ನಿವಾರಕ ವಿನಾಯಕನಿಗೆ ಸರ್ವತ್ರ ಮೊದಲ ಪೂಜೆ ಸಲ್ಲಿಸುವುದು ಹಿಂದೂಗಳ ವಾಡಿಕೆ. ಆದರೆ ಗಣೇಶ ಹಬ್ಬವನ್ನು ಮುಸ್ಲಿಂ ಕುಟುಂಬವೊಂದು ಆಚರಿಸುವ ಮೂಲಕ ಗಮನ ಸೆಳೆಯುತ್ತಿದೆ.
ಮುಸ್ಲಿಮರಿಂದ ವಿಘ್ನ ವಿನಾಯಕನ ಆರಾಧನೆ: ಗಮನ ಸೆಳೆದ ಕುಟುಂಬ - Gangavati latest news
ಗಣೇಶ ಚತುರ್ಥಿಯನ್ನು ಹಿಂದೂಗಳು ಆಚರಣೆ ಮಾಡುವುದನ್ನು ನೋಡಿದ್ದೇವೆ. ಆದರೆ ಗಂಗಾವತಿಯಲ್ಲಿ ಮುಸ್ಲಿಂ ಕುಟುಂಬವೊಂದು ಗಣೇಶನನ್ನು ಪ್ರತಿಷ್ಠಾಪನೆ ಮಾಡಿ ಹಬ್ಬ ಆಚರಿಸಿದೆ.
![ಮುಸ್ಲಿಮರಿಂದ ವಿಘ್ನ ವಿನಾಯಕನ ಆರಾಧನೆ: ಗಮನ ಸೆಳೆದ ಕುಟುಂಬ Muslim family](https://etvbharatimages.akamaized.net/etvbharat/prod-images/768-512-07:53:43:1598279023-kn-gvt-06-24-lord-ganesh-worship-by-musleem-family-pic-kac10005-24082020194136-2408f-1598278296-592.jpg)
Muslim family
ನಗರದ 23ನೇ ವಾರ್ಡ್ ಗುಂಡಮ್ಮ ಕ್ಯಾಂಪಿನಲ್ಲಿರುವ ಕೆ. ಹುಸೇನಸಾಬ ಹಾಗೂ ಹುಸೇನಬಿ ಎಂಬ ದಂಪತಿ ವಿನಾಯನ ಆರಾಧಿಸುವ ಮೂಲಕ ಗಮನ ಸೆಳೆಯುತ್ತಿದೆ. ಪ್ರತಿವರ್ಷ ಈ ಕುಟುಂಬ ಗಣೇಶ ಚತುರ್ಥಿಯೆಂದು ಮನೆಯಲ್ಲಿ ಹಿಂದೂಗಳಂತೆ ಸಂಪ್ರದಾಯ ಬದ್ಧವಾಗಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುತ್ತಾರೆ. ಬಳಿಕ ಶಾಸ್ತ್ರೋಕ್ತವಾಗಿ ವಿಸರ್ಜನೆ ಮಾಡುವ ಮೂಲಕ ಹಬ್ಬವನ್ನು ಇಡೀ ಕುಟುಂಬ ಸದಸ್ಯರು ಆಚರಿಸುತ್ತಾರೆ.
ಮುಸ್ಲಿಂ ಸಮುದಾಯದ ಪಿಂಜಾರ ನದಾಫ್ ವರ್ಗಕ್ಕೆ ಸೇರಿದ ಈ ಕುಟುಂಬ, ಕಳೆದ ಹಲವು ವರ್ಷದಿಂದ ಹಿಂದೂ ಸಂಪ್ರದಾಯ, ಸಂಸ್ಕೃತಿಯಂತೆ ಹಬ್ಬಗಳನ್ನು ಆಚರಿಸಿಕೊಂಡು ಬಂದಿರುವುದು ವಿಶೇಷವಾಗಿದೆ.