ಕರ್ನಾಟಕ

karnataka

ETV Bharat / state

ಕೆಲಸಕ್ಕೆ ಬಾರದ ಹುಡುಗರು ಪ್ರತಿಭಟನೆ ಮಾಡಿದರೆ ಗಮನಕೊಡಬೇಕಿಲ್ಲ: ಬಸವರಾಜ ದಡೇಸುಗೂರು - ಬಸವರಾಜ ದಡೇಸ್ಗೂರ್

ಕಾಲುವೆಗೆ ನೀರು ಯಾವ ಸಂದರ್ಭದಲ್ಲಿ ಎಷ್ಟು ಪ್ರಮಾಣದಲ್ಲಿ ಬಿಡಬೇಕು. ಹೇಗೆ ರೈತರನ್ನು ಮತ್ತು ಅವರ ಬೆಳೆಯನ್ನು ರಕ್ಷಿಸಿಕೊಳ್ಳಬೇಕು ಎಂಬುವುದರ ಬಗ್ಗೆ ಆಡಳಿತ ನಡೆಸುವ ನಮಗೆ ಹಾಗೂ ಅಧಿಕಾರಿಗಳಿಗೆ ಸ್ಪಷ್ಟವಾಗಿ ಗೊತ್ತಿದೆ ಎಂದಿದ್ದಾರೆ.

MLA Basavaraj  Dadesgur
ಬಸವರಾಜ ದಢೇಸ್ಗೂರ್

By

Published : Apr 17, 2021, 4:21 PM IST

Updated : Apr 17, 2021, 5:59 PM IST

ಗಂಗಾವತಿ (ಕೊಪ್ಪಳ):ಗದ್ದೆ ಒಣಗುತ್ತಿವೆ ನೀರು ಬಿಡಿ ಅಂತ ಯಾರೋ ಅಲ್ಪಸ್ವಲ್ಪ ಜ್ಞಾನ ಇರುವ ಕೆಲಸಕ್ಕೆ ಬಾರದ ಹುಡುಗಬಟ್ಟೆಗಳು ಮಾಡುವ ಪ್ರತಿಭಟನೆಗೆ ನಾವು ಗಮನ ಕೊಡಬೇಕಿಲ್ಲ ಎಂದು ಕಾಂಗ್ರೆಸ್ ಮುಖಂಡರಿಗೆ ಶಾಸಕ ಬಸವರಾಜ ದಡೇಸುಗೂರು​​ ಪರೋಕ್ಷವಾಗಿ ಕಾಲೆಳೆದಿದ್ದಾರೆ.

ಕಾಲುವೆ ವೀಕ್ಷಣೆಯ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಲುವೆಗೆ ನೀರು ಯಾವ ಸಂದರ್ಭದಲ್ಲಿ ಎಷ್ಟು ಪ್ರಮಾಣದಲ್ಲಿ ಬಿಡಬೇಕು. ಹೇಗೆ ರೈತರನ್ನು ಮತ್ತು ಅವರ ಬೆಳೆ ರಕ್ಷಿಸಿಕೊಳ್ಳಬೇಕು ಎಂಬುವುದರ ಬಗ್ಗೆ ಆಡಳಿತ ನಡೆಸುವ ನಮಗೆ ಹಾಗೂ ಅಧಿಕಾರಿಗಳಿಗೆ ಸ್ಪಷ್ಟವಾಗಿ ಗೊತ್ತಿದೆ.

ಕೆಲಸಕ್ಕೆ ಬಾರದ ಹುಡುಗರು ಪ್ರತಿಭಟನೆ ಮಾಡಿದರೆ ಗಮನಕೊಡಬೇಕಿಲ್ಲ: ಬಸವರಾಜ ದಢೇಸ್ಗೂರ್

ಆದರೆ ಏನೂ ಕೆಲಸ ಇಲ್ಲದ ಕೆಲ ಹುಡುಗಬಟ್ಟೆಗಳು ಸೇರಿ ನೀರಿಲ್ಲ ನೀರಿಲ್ಲ ಎಂದು ತುಗಭದ್ರಾ ನದಿಗೆ ಹೋಗಿ ನಾನಾ ಭಂಗಿಯಲ್ಲಿ ಆ್ಯಕ್ಷನ್ ಚಿತ್ರಗಳು ತೆಗೆಯಿಸಿಕೊಂಡರೆ ಪ್ರಚಾರಕ್ಕಾಗಿ ಪ್ರತಿಭಟನೆ ಮಾಡಿದ್ದಾರೆ ಎಂದಿದ್ದಾರೆ.

ನೀರಿನ ವಿಚಾರಕ್ಕೆ ನಾವಾಗಲಿ ನಮ್ಮ ಅಧಿಕಾರಿಗಳಾಗಲಿ ಸದಾ ಜಾಗೃತರಾಗಿದ್ದು, ಎಷ್ಟು ನೀರು ಬಿಡಬೇಕು ಎಂಬುವುದು ಬಗ್ಗೆ ಅರಿವಿದೆ ಎಂದಿದ್ದಾರೆ.

Last Updated : Apr 17, 2021, 5:59 PM IST

ABOUT THE AUTHOR

...view details