ಕರ್ನಾಟಕ

karnataka

ETV Bharat / state

'ಬಸವಕಲ್ಯಾಣದಲ್ಲಿ ಕಾಂಗ್ರೆಸ್​ ಸೋಲಿಸಲೆಂದೇ ಕುಮಾರಸ್ವಾಮಿ ಅಭ್ಯರ್ಥಿ ಹಾಕಿದ್ದರು' - ವೈರಲ್ ವಿಡಿಯೋ

ಅಲ್ಪಸಂಖ್ಯಾತರ ಮತಗಳು ಹೆಚ್ಚಿರುವ ಬಸವಕಲ್ಯಾಣದಲ್ಲಿ ಜೆಡಿಎಸ್ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು ಕಾಂಗ್ರೆಸ್​ನ ಕೋಪಕ್ಕೆ ಕಾರಣವಾಗಿತ್ತು. ಈ ಬಗ್ಗೆ ಎರಡೂ ಪಕ್ಷಗಳ ನಾಯಕರ ನಡುವೆ ವಾಗ್ವಾದ ಕೂಡ ನಡೆದಿತ್ತು. ಇದೀಗ, ಚುನಾವಣೆ ಮುಗಿದ ಬಳಿಕ ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅವರ ಫೋನ್ ಕರೆಯೊಂದು ವೈರಲ್ ಆಗಿದೆ.

MLA Amaregowda Phone call Goes Viral
ವೈರಲ್ ವಿಡಿಯೋ

By

Published : May 3, 2021, 12:52 PM IST

ಕುಷ್ಟಗಿ(ಕೊಪ್ಪಳ): ಬಸವಕಲ್ಯಾಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಮಾಜಿ ಸಿಎಂ ಕುಮಾರಸ್ವಾಮಿ ಉದ್ದೇಶಪೂರ್ವಕವಾಗಿ ಅಭ್ಯರ್ಥಿ ಹಾಕಿದ್ದರು ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಆಪ್ತರೊಂದಿಗೆ ಕರೆ ಮಾಡಿ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.

ಬಸವಕಲ್ಯಾಣದಲ್ಲಿ ಮಾಜಿ ಸಿಎಂ ಪುತ್ರ ಡಾ.ಅಜಯ್​ ಕುಮಾರ್​ ಸಿಂಗ್ ಇಲ್ಲವೇ ಅವರ ಸಹೋದರ ಚಂದ್ರ ಶೇಖರ್​​ಗೆ ಟಿಕೆಟ್​ ನೀಡುವಂತೆ ಪಕ್ಷದ ಸಭೆಯಲ್ಲಿ ಪ್ರಸ್ತಾಪಿಸಿದ್ದೆ. ಆದರೆ, ಜನರಿಗೆ ತಪ್ಪು ಸಂದೇಶ ಹೋಗುತ್ತದೆ ಎಂದು ಮಾಲಾ ಅವರಿಗೆ ಪಕ್ಷ ಟಿಕೆಟ್​ ನೀಡಿತು ಎಂದು ದೂರವಾಣಿ ಕರೆಯಲ್ಲಿ ಅಮರೇಗೌಡ ಹೇಳುತ್ತಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ.

ವೈರಲ್ ವಿಡಿಯೋ

ಇದನ್ನೂಓದಿ : ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಗಳಿಸಿದ್ದು.. ಕಳೆದುಕೊಂಡಿದ್ದಿಷ್ಚು..

​ಮಸ್ಕಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಗೆಲುವು ಮುಂದಿನ ಚುನಾವಣೆಯ ದಿಕ್ಸೂಚಿಯಾಗಿದೆ. ಕ್ಷೇತ್ರದ ಮತದಾರರು ಹಣದ ಆಮಿಷಕ್ಕೆ ಒಳಗಾಗದೆ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿರುವುದಕ್ಕೆ, ಸಿದ್ದರಾಮಯ್ಯ ಅವರು ಫೋನ್ ಮಾಡಿ ನಮ್ಮನ್ನು, ಹಂಪನಗೌಡ ಬಾದರ್ಲಿ, ಬೋಸರಾಜ್ ಅವರನ್ನು ಶ್ಲಾಘಿಸಿದ್ದಾರೆ. ಅದಕ್ಕೆ ನಾನು ನಿಮ್ಮ ವರ್ಚಸ್ಸು ಕಾರಣ ಎಂದು ಸಿದ್ದರಾಮಯ್ಯ ಅವರಿಗೆ ಹೇಳಿದ್ದೆ ಎಂದು ಶಾಸಕ ಅಮರೇಗೌಡ ಹೇಳಿದ್ದಾರೆ.

ABOUT THE AUTHOR

...view details