ಕೊಪ್ಪಳ: ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ವಿರುದ್ಧ ಸಚಿವ ವೆಂಕಟರಾವ್ ನಾಡಗೌಡ ನಾಲಿಗೆ ಹರಿಬಿಟ್ಟಿದ್ದಾರೆ.
ಕೊಪ್ಪಳದ ಖಾಸಗಿ ಹೋಟೆಲ್ಲ್ಲಿ ನಡೆದ ಜೆಡಿಎಸ್-ಕಾಂಗ್ರೆಸ್ ಮುಖಂಡರ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡುವಾಗ ಸಚಿವ ನಾಡಗೌಡ ಸುಮಲತಾ ಅಂಬರೀಶ್ ಅವರಿಗೆ ಆಕೆ, ಈಕೆ ಎಂಬ ಏಕವಚನದ ಪದ ಪ್ರಯೋಗಿಸಿದ್ದಾರೆ.
ಕುಮಾರಸ್ವಾಮಿ ಮಂಡ್ಯ ಚುನಾವಣೆಯಲ್ಲಿ ಸುಮಲತಾಳನ್ನು ಹತ್ತಿಕ್ಕುವುದು ಸಹಜ. ಸುಮಲತಾಳನ್ನು ಎತ್ತಿ ಮೇಲೆ ಕೂರಿಸಿ ಆಕೆಯನ್ನು ಗೆಲ್ಲಿಸಿ ಎಂದು ಹೇಳೋಕಾಗಲ್ಲ ಎಂದು ಏಕವಚನ ಪದ ಬಳಸುವ ಮೂಲಕ ಸುಮಲತಾ ಅಂಬರೀಶ್ ವಿರುದ್ಧ ಸಚಿವ ನಾಡಗೌಡನಾಲಿಗೆಹರಿಬಿಟ್ಟರು.