ಕರ್ನಾಟಕ

karnataka

ETV Bharat / state

ದೈಹಿಕ ಜೊತೆಗೆ ಮಾನಸಿಕ ಆರೋಗ್ಯವೂ ಕಾಪಾಡಿಕೊಳ್ಳಿ: ಕೆಎಸ್​ಆರ್​​​ಪಿ ಸಿಬ್ಬಂದಿಗೆ ಎಡಿಜಿಪಿ ಸಲಹೆ - Karnataka rajyotsava celebrate in koppal

ಬಿಎಸ್ಎಫ್, ಸಿಆರ್​​ಪಿಫ್ ಯೋಧರಂತೆ ಕೆಎಸ್ಆರ್​​ಪಿ ಸಿಬ್ಬಂದಿ ಸಹ ಆರೋಗ್ಯ ಕಾಪಾಡಿಕೊಂಡು, ಶಿಸ್ತಿನೊಂದಿಗೆ ಕರ್ತವ್ಯ ನಿರ್ವಹಿಸುವ ಮೂಲಕ ಸಾರ್ವಜನಿಕರ ಗೌರವ ಪಾತ್ರಕ್ಕೆ ಒಳಗಾಗಬೇಕು ಎಂದು ಕೆಎಸ್ಆರ್​​​ಪಿ ಎಡಿಜಿಪಿ ಅಲೋಕ್ ಕುಮಾರ್ ಅವರು ಸಿಬ್ಬಂದಿಗೆ ಸಲಹೆ ನೀಡಿದರು.

Marathon
ಮ್ಯಾರಥಾನ್​​ನಲ್ಲಿ ಗೆದ್ದವರಿಗೆ ಪ್ರಶಸ್ತಿ ವಿತರಿಸಲಾಯಿತು

By

Published : Nov 3, 2020, 4:07 PM IST

ಕೊಪ್ಪಳ:ಕರ್ನಾಟಕ ರಾಜ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಉದ್ದೇಶದಿಂದ ತಾಲೂಕಿನ ಮುನಿರಾಬಾದ್​​​​ನಲ್ಲಿ ಇಂಡಿಯನ್ ರಿಸರ್ವ್ ಬೆಟಾಲಿಯನ್ ಹಾಗೂ ಕೆಎಸ್ಆರ್​​​​ಪಿಯಿಂದ ಮ್ಯಾರಥಾನ್ ನಡೆಯಿತು. ಮ್ಯಾರಥಾನ್​​​​ಗೆ ಎಡಿಜಿಪಿ ಅಲೋಕ್ ಕುಮಾರ್ ಚಾಲನೆ ನೀಡಿದರು.

ಮ್ಯಾರಥಾನ್​​ನಲ್ಲಿ ಪಾಲ್ಗೊಂಡಿದ್ದ ಸಿಬ್ಬಂದಿ

ಕೆಎಸ್ಆರ್​​ಪಿ ಕ್ಯಾಂಪಸ್​​​ನಿಂದ ಆರಂಭವಾದ ಸುಮಾರು 6.7 ಕಿಮೀ ಮ್ಯಾರಾಥಾನ್, ತುಂಗಭದ್ರಾ ಜಲಾಶಯದ ಬಳಿ ಮುಕ್ತಾಯಗೊಂಡಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೆಎಸ್ಆರ್​​​​ಪಿ​​​​ ಸಿಬ್ಬಂದಿ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ನಾವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದರು.

ಮ್ಯಾರಥಾನ್​ನಲ್ಲಿ ಓಡಿದ ಸಿಬ್ಬಂದಿ

ಈಗಾಗಲೇ ಕೊರೊನಾ ಜನರನ್ನು ವಿಪರೀತವಾಗಿ ಬಾಧಿಸಿದೆ. ಮಧುಮೇಹ, ಬಿಪಿ ಸೇರಿದಂತೆ ಅನೇಕ‌ ಕಾಯಿಲೆಗಳನ್ನು ಹೊಂದಿರುವ ಜನರಿಗೆ ಕೊರೊನಾ ಅಂಟಿಕೊಂಡು ಬಲಿ ತೆಗೆದುಕೊಂಡಿತು. ಹೀಗಾಗಿ, ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುವುದು ಹೆಚ್ಚು ಅವಶ್ಯಕ ಎಂದು ಹೇಳಿದರು.

ಕೆಎಸ್ಆರ್​​​ಪಿ ಎಡಿಜಿಪಿ ಅಲೋಕ್ ಕುಮಾರ್

ABOUT THE AUTHOR

...view details