ಕೊಪ್ಪಳ:ಕರ್ನಾಟಕ ರಾಜ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಉದ್ದೇಶದಿಂದ ತಾಲೂಕಿನ ಮುನಿರಾಬಾದ್ನಲ್ಲಿ ಇಂಡಿಯನ್ ರಿಸರ್ವ್ ಬೆಟಾಲಿಯನ್ ಹಾಗೂ ಕೆಎಸ್ಆರ್ಪಿಯಿಂದ ಮ್ಯಾರಥಾನ್ ನಡೆಯಿತು. ಮ್ಯಾರಥಾನ್ಗೆ ಎಡಿಜಿಪಿ ಅಲೋಕ್ ಕುಮಾರ್ ಚಾಲನೆ ನೀಡಿದರು.
ದೈಹಿಕ ಜೊತೆಗೆ ಮಾನಸಿಕ ಆರೋಗ್ಯವೂ ಕಾಪಾಡಿಕೊಳ್ಳಿ: ಕೆಎಸ್ಆರ್ಪಿ ಸಿಬ್ಬಂದಿಗೆ ಎಡಿಜಿಪಿ ಸಲಹೆ - Karnataka rajyotsava celebrate in koppal
ಬಿಎಸ್ಎಫ್, ಸಿಆರ್ಪಿಫ್ ಯೋಧರಂತೆ ಕೆಎಸ್ಆರ್ಪಿ ಸಿಬ್ಬಂದಿ ಸಹ ಆರೋಗ್ಯ ಕಾಪಾಡಿಕೊಂಡು, ಶಿಸ್ತಿನೊಂದಿಗೆ ಕರ್ತವ್ಯ ನಿರ್ವಹಿಸುವ ಮೂಲಕ ಸಾರ್ವಜನಿಕರ ಗೌರವ ಪಾತ್ರಕ್ಕೆ ಒಳಗಾಗಬೇಕು ಎಂದು ಕೆಎಸ್ಆರ್ಪಿ ಎಡಿಜಿಪಿ ಅಲೋಕ್ ಕುಮಾರ್ ಅವರು ಸಿಬ್ಬಂದಿಗೆ ಸಲಹೆ ನೀಡಿದರು.
![ದೈಹಿಕ ಜೊತೆಗೆ ಮಾನಸಿಕ ಆರೋಗ್ಯವೂ ಕಾಪಾಡಿಕೊಳ್ಳಿ: ಕೆಎಸ್ಆರ್ಪಿ ಸಿಬ್ಬಂದಿಗೆ ಎಡಿಜಿಪಿ ಸಲಹೆ Marathon](https://etvbharatimages.akamaized.net/etvbharat/prod-images/768-512-9412542-790-9412542-1604395026013.jpg)
ಮ್ಯಾರಥಾನ್ನಲ್ಲಿ ಗೆದ್ದವರಿಗೆ ಪ್ರಶಸ್ತಿ ವಿತರಿಸಲಾಯಿತು
ಕೆಎಸ್ಆರ್ಪಿ ಕ್ಯಾಂಪಸ್ನಿಂದ ಆರಂಭವಾದ ಸುಮಾರು 6.7 ಕಿಮೀ ಮ್ಯಾರಾಥಾನ್, ತುಂಗಭದ್ರಾ ಜಲಾಶಯದ ಬಳಿ ಮುಕ್ತಾಯಗೊಂಡಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೆಎಸ್ಆರ್ಪಿ ಸಿಬ್ಬಂದಿ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ನಾವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದರು.
ಈಗಾಗಲೇ ಕೊರೊನಾ ಜನರನ್ನು ವಿಪರೀತವಾಗಿ ಬಾಧಿಸಿದೆ. ಮಧುಮೇಹ, ಬಿಪಿ ಸೇರಿದಂತೆ ಅನೇಕ ಕಾಯಿಲೆಗಳನ್ನು ಹೊಂದಿರುವ ಜನರಿಗೆ ಕೊರೊನಾ ಅಂಟಿಕೊಂಡು ಬಲಿ ತೆಗೆದುಕೊಂಡಿತು. ಹೀಗಾಗಿ, ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುವುದು ಹೆಚ್ಚು ಅವಶ್ಯಕ ಎಂದು ಹೇಳಿದರು.
ಕೆಎಸ್ಆರ್ಪಿ ಎಡಿಜಿಪಿ ಅಲೋಕ್ ಕುಮಾರ್