ಕರ್ನಾಟಕ

karnataka

ETV Bharat / state

ಕೊಪ್ಪಳ: ನಾಪತ್ತೆ ಆಗಿದ್ದ ವ್ಯಕ್ತಿ ತೋಟದ ಮನೆಯಲ್ಲಿ ಹತ್ಯೆ - ಕೊಪ್ಪಳ ಎಸ್ಪಿ ಯಶೋಧ ವಂಟಗೋಡಿ

Koppal murder case: ಸೋಮವಾರ ನಾಪತ್ತೆಯಾಗಿದ್ದ ವ್ಯಕ್ತಿ ತನ್ನದೇ ತೋಟದ ಮನೆಯಲ್ಲಿ ಮಂಗಳವಾರ ರಾತ್ರಿ ಕೊಲೆಯಾಗಿರುವ ಘಟನೆ ನಡೆದಿದೆ.

ಮಾರಾಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿ ಕೊಲೆ
ಮಾರಾಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿ ಕೊಲೆ

By ETV Bharat Karnataka Team

Published : Dec 6, 2023, 4:07 PM IST

Updated : Dec 6, 2023, 4:17 PM IST

ಕೊಪ್ಪಳ ಎಸ್ಪಿ ಯಶೋಧ ವಂಟಗೋಡಿ ಮಾಹಿತಿ

ಕೊಪ್ಪಳ:ವ್ಯಕ್ತಿಯೊಬ್ಬರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಲೆಗೈದಿರುವ ಘಟನೆ ಯಲಬುರ್ಗಾ ತಾಲೂಕಿನ ವಟಪರ್ವಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ವಟಪರ್ವಿಯ ಪ್ರಭುರಾಜ ಕೊಳಜಿ (38) ಸಾವಿಗೀಡಾಗಿದ್ದಾರೆ. ಸೋಮವಾರದಿಂದ ನಾಪತ್ತೆಯಾಗಿದ್ದ ಪ್ರಭುರಾಜ, ಮಂಗಳವಾರ ರಾತ್ರಿ ತೋಟದ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಬೇವೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಎಸ್ಪಿ ಹೇಳಿಕೆ:"ಪ್ರಭುರಾಜ್ ಎಂಬವರು ಸೋಮವಾರ ನಾಪತ್ತೆಯಾಗಿದ್ದರು. ಮಂಗಳವಾರ ರಾತ್ರಿ ಮಲಗಿರುವ ಸ್ಥಳದಲ್ಲೇ ಕೊಲೆಯಾದಂತೆ ತೋಟದ ಮನೆಯಲ್ಲಿ ಪತ್ತೆಯಾಗಿರುವ ಬಗ್ಗೆ ಮಾಹಿತಿ ಬಂತು. ತಕ್ಷಣ ಘಟನಾ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಂದ ಮಾಹಿತಿ ಪಡೆದಿದ್ದೇವೆ. ಕುಟುಂಬಸ್ಥರು ಯಾರ ಮೇಲೆಯೂ ಅನುಮಾನ ವ್ಯಕ್ತಪಡಿಸಿಲ್ಲ. ಮೃತ ವ್ಯಕ್ತಿಗೆ ಇಬ್ಬರು ಮಕ್ಕಳಿದ್ದಾರೆ. ಆತ ಕುಡಿತದ ಚಟಕ್ಕೆ ದಾಸನಾಗಿದ್ದ ಎಂದು ಪತ್ನಿ ತಿಳಿಸಿದ್ದಾರೆ. ಕುಟುಂಬಸ್ಥರ ದೂರಿನಂತೆ ಬೇವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು" ಎಂದು ಕೊಪ್ಪಳ ಎಸ್ಪಿ ಯಶೋಧ ವಂಟಗೋಡಿ ಮಾಹಿತಿ ನೀಡಿದರು.

ಇತ್ತೀಚಿನ ಪ್ರಕರಣಗಳು- ಮಚ್ಚಿನಿಂದ ಹೊಡೆದು ವ್ಯಕ್ತಿ ಕೊಲೆ: ಡಿಸೆಂಬರ್​ 4ರಂದು ಬೆಳಗಾವಿಯ ಮರಾಠ ಕಾಲೋನಿಯಲ್ಲಿ ವ್ಯಕ್ತಿಯನ್ನು ರಸ್ತೆಯಲ್ಲೇ ಕೊಲೆ ಮಾಡಲಾಗಿತ್ತು. ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ನಿಂಗಪ್ಪ ಹಡಪದ (60) ಮೃತಪಟ್ಟಿದ್ದರು. ಆಸ್ತಿ ವಿಚಾರಕ್ಕೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಮೂವರು ಆರೋಪಿಗಳು ಸೇರಿಕೊಂಡು ಮಚ್ಚಿನಿಂದ ಹೊಡೆದು ಕೊಲೆ ಮಾಡಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್​ನಲ್ಲಿ ಸೆರೆಹಿಡಿದಿದ್ದರು. ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋಲಾರ- ಸೆಕ್ಯುರಿಟಿ ಗಾರ್ಡ್‌ ಹತ್ಯೆ:ಹಳೆ ದ್ವೇಷದ ಹಿನ್ನೆಲೆಯಲ್ಲಿ ಮಚ್ಚಿನಿಂದ ಕೊಚ್ಚಿ ಸೆಕ್ಯುರಿಟಿ ಗಾರ್ಡ್‌ನನ್ನು ಕೊಲೆಗೈದಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮಿಣಜೇನಹಳ್ಳಿ ಬಳಿ ಡಿಸೆಂಬರ್​ 25ರಂದು ಜರುಗಿತ್ತು. ಮಿಣಜೇನಹಳ್ಳಿಯ ಮಂಜುನಾಥ್ (48) ಕೊಲೆಯಾದವರು.

ಇದನ್ನೂ ಓದಿ:ಶಿವಮೊಗ್ಗ: ಆಸ್ತಿ ವಿಚಾರಕ್ಕೆ ಸೋದರಸಂಬಂಧಿಯನ್ನು ಪೆಟ್ರೋಲ್ ಹಾಕಿ ಸಜೀವ ದಹನ ಮಾಡಿದ ಆರೋಪಿಗಳು

Last Updated : Dec 6, 2023, 4:17 PM IST

ABOUT THE AUTHOR

...view details