ಕರ್ನಾಟಕ

karnataka

By

Published : Jan 23, 2020, 1:24 PM IST

ETV Bharat / state

ಮಾಜಿ ಸಚಿವರ ರೈಸ್ ಮಿಲ್​ನಲ್ಲಿ ಕಾರ್ಮಿಕ ಅನುಮಾನಾಸ್ಪದ ಸಾವು

ಮಾಜಿ ಸಚಿವರೊಬ್ಬರ ಒಡೆತನದ ರೈಸ್ ಮಿಲ್‌ವೊಂದರಲ್ಲಿ ಕಾರ್ಮಿಕನೊಬ್ಬನಿಗೆ ದೇಹದಲ್ಲಿ ಊತ ಕಾಣಿಸಿಕೊಂಡು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ.

Labor suspected death
ಕಾರ್ಮಿಕ ಅನುಮಾನಸ್ಪದ ಸಾವು

ಗಂಗಾವತಿ: ಮಾಜಿ ಸಚಿವರೊಬ್ಬರ ಒಡೆತನದ ರೈಸ್ ಮಿಲ್‌ವೊಂದರಲ್ಲಿ ಕಾರ್ಮಿಕನೊಬ್ಬನಿಗೆ ದೇಹದಲ್ಲಿ ಊತ ಕಾಣಿಸಿಕೊಂಡು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ.

ದೇಹದಲ್ಲಿ ಊತ ಕಾಣಿಸಿಕೊಂಡು ಕಾರ್ಮಿಕ ಸಾವು

ಗೌಳಿನಗರ ಲಕ್ಷ್ಮಿಕ್ಯಾಂಪಿನ ಹುಲುಗಪ್ಪ ನಾಯಕ (47) ಮೃತ ಕಾರ್ಮಿಕ.

ಮಾಜಿ ಸಚಿವ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮಲ್ಲಿಕಾರ್ಜುನ ನಾಗಪ್ಪ ಅವರ ಒಡೆತನದ ಕಂಪ್ಲಿ ರಸ್ತೆಯಲ್ಲಿರುವ ಮಲ್ಲೇಶ್ವರ ರೈಸ್ ಇಂಡಸ್ಟ್ರೀಸ್​ನಲ್ಲಿ ಈ ಘಟನೆ ನಡೆದಿದೆ.

ಸಹಪಾಠಿ ಕಾರ್ಮಿಕರು ಗಾಳಿ ಹಾಕುವ ಯಂತ್ರದ ಮೂಲಕ ಹುಲುಗಪ್ಪನಿಗೆ ಗುದದ್ವಾರದ ಮೂಲಕ ಬಲವಂತವಾಗಿ ಗಾಳಿ ಹಾಕಿದ್ದಾರೆ. ಇದೇ ಕಾರಣಕ್ಕೆ ಹೊಟ್ಟೆ ಉಬ್ಬಿ ಕಾರ್ಮಿಕ ಸಾವಿಗೀಡಾಗಿದ್ದಾನೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ನಗರ ಠಾಣೆಯ ಪೊಲೀಸರು ಈಗಾಗಲೇ‌ ಮೂವರು ಕಾರ್ಮಿಕರನ್ನು ವಶಕ್ಕೆ ಪಡೆದಿದ್ದಾರೆ. ಮತ್ತೊಬ್ಬ ತಲೆ‌ಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

For All Latest Updates

ABOUT THE AUTHOR

...view details