ಕರ್ನಾಟಕ

karnataka

ETV Bharat / state

ಗಂಗಾವತಿಯಲ್ಲಿ ಬಸ್ ಅಪಘಾತ.. ಸ್ವಲ್ಪದರಲ್ಲೇ ತಪ್ಪಿತು ಭಾರಿ ಅನಾಹುತ - ಗಂಗಾವತಿಯಲ್ಲಿ ತಡರಾತ್ರಿ ಸಾರಿಗೆ ಬಸ್ ಅಪಘಾತ

ರಾಯಚೂರಿನಿಂದ ಕೊಪ್ಪಳಕ್ಕೆ ಹೊರಟಿದ್ದ ಸಾರಿಗೆ ಸಂಸ್ಥೆಯ ಬಸ್ ಗೆ ಅಡ್ಡಲಾಗಿ ಬಂದ ಬೈಕ್ ಸವಾರರನ್ನು ತಪ್ಪಿಸಲು ಹೋಗಿ ಸಾರಿಗೆ ಬಸ್ ಅಪಘಾತವಾದ ಘಟನೆ ಗಂಗಾವತಿಯಲ್ಲಿ ನಡೆದಿದೆ. ಸಾರಿಗೆ ಬಸ್ ಇಲ್ಲಿನ ಕನಕದಾಸ ವೃತ್ತಕ್ಕೆ ಡಿಕ್ಕಿಯಾಗಿದ್ದು, ಸಂಪೂರ್ಣ ಹಾನಿಯಾಗಿದೆ.

ksrtc bus accident in gangavati
ಗಂಗಾವತಿ : ಸಾರಿಗೆ ಬಸ್ ಅಪಘಾತ , ಹಲವರಿಗೆ ಗಾಯ

By

Published : Apr 7, 2022, 9:57 AM IST

ಗಂಗಾವತಿ(ಕೊಪ್ಪಳ): ಮಧ್ಯರಾತ್ರಿ ಸಾರಿಗೆ ಸಂಸ್ಥೆಯ ಬಸ್ ಗೆ ಅಡ್ಡಲಾಗಿ ಬಂದ ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ ಸಾರಿಗೆ ಬಸ್ ಇಲ್ಲಿನ ಕನಕದಾಸ ವೃತ್ತಕ್ಕೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಪರಿಣಾಮ ಕನಕದಾಸ ವೃತ್ತ ಸಂಪೂರ್ಣ ಹಾನಿಯಾಗಿದೆ. ಅದೃಷ್ಟ ವಶಾತ್ ಎದುರಿಗೆ ಇದ್ದ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ಬಸ್ ಡಿಕ್ಕಿಯಾಗುವುದನ್ನು ತಪ್ಪಿಸಿದ ಚಾಲಕ ಸಂಭಾವ್ಯ ಅಪಘಾತವನ್ನು ತಡೆದಿದ್ದಾನೆ.

ರಾಯಚೂರಿನಿಂದ ಕೊಪ್ಪಳಕ್ಕೆ ಹೊರಟಿದ್ದ ಸಾರಿಗೆ ಸಂಸ್ಥೆಯ ವಾಹನ ಮಧ್ಯರಾತ್ರಿ 2.30ಕ್ಕೆ ಗಂಗಾವತಿಗೆ ಬಂದಾಗ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಕೊಪ್ಪಳ ಘಟಕದ ಚಾಲಕ ವೆಂಕಪ್ಪ ಸೇರಿದಂತೆ ನಾಲ್ವರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳಿಗೆ ಇಲ್ಲಿನ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗಿದೆ. ಸಾರಿಗೆ ವಾಹನದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

ಗಂಗಾವತಿಯಲ್ಲಿ ಸಾರಿಗೆ ಬಸ್ ಅಪಘಾತ , ಹಲವರಿಗೆ ಗಾಯ

ಒಂದು ವೇಳೆ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ವಾಹನ ಡಿಕ್ಕಿಯಾಗಿದ್ದರೆ ಸಾವು-ನೋವು ಸಂಭವಿಸುವ ಸಾಧ್ಯತೆ ಇತ್ತು ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ಓದಿ :'ಮದುವೆ ಉದ್ದೇಶದೊಂದಿಗೆ ಸಹಮತದ ದೈಹಿಕ ಸಂಬಂಧ ಲೈಂಗಿಕ ದೌರ್ಜನ್ಯವಲ್ಲ'

ABOUT THE AUTHOR

...view details