ಕರ್ನಾಟಕ

karnataka

By

Published : Oct 21, 2020, 5:06 PM IST

ETV Bharat / state

ಯತ್ನಾಳ್‌ರನ್ನ ಪಕ್ಷದಿಂದಲೇ ಹೊರ ಹಾಕುವಂತೆ ಅಧ್ಯಕ್ಷರಿಗೆ ಮನವಿ- ಸಚಿವ ಈಶ್ವರಪ್ಪ

ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಯಿಂದ ಕಾಂಗ್ರೆಸ್​ನವರಿಗೆ ಸಂತೋಷವಾಗಿರಬಹುದು. ನಾವು ಬಿಜೆಪಿ ಸರ್ಕಾರ ಬೀಳಿಸುವುದಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ನೀವಲ್ಲ, ಸ್ವರ್ಗದಲ್ಲಿರುವ ಇಂದಿರಾಗಾಂಧಿ ಬಂದರೂ ಬಿಜೆಪಿ ಸರ್ಕಾರವನ್ನು ಬೀಳಿಸೋಕೆ ಆಗೋದಿಲ್ಲ..

KS Eshwarappa
ಕೆಎಸ್​ ಈಶ್ವರಪ್ಪ

ಕೊಪ್ಪಳ:ಫೂಲಿಷ್ (foolish) ಹೇಳಿಕೆ ನೀಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳರನ್ನು ಯಾವುದೇ ಸೂಚನೆ ಕೊಡದೆ ಪಕ್ಷದಿಂದ ಹೊರಹಾಕುವಂತೆ ಪಕ್ಷದ ಅಧ್ಯಕ್ಷರಿಗೆ ಮನವಿ ಮಾಡುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಸಚಿವ ಕೆ.ಎಸ್. ಈಶ್ವರಪ್ಪ

ಕೊಪ್ಪಳದಲ್ಲಿ ಮಾತನಾಡಿದ ಸಚಿವರು, ಕೆಲವರಿಗೆ ಬಾಯಿ ಚಪಲ. ಬಸವನಗೌಡ ಪಾಟೀಲ್ ಯತ್ನಾಳ್ ಉತ್ತರನ ಪೌರುಷದಂತೆ ಮಾತನಾಡಿ ಫೂಲಿಷ್ ಹೇಳಿಕೆ‌ ನೀಡುತ್ತಿದ್ದಾರೆ. ಅವರಿಗೆ ನೋಟಿಸ್ ಕೊಡುವ ಅವಶ್ಯಕತೆ ಇಲ್ಲ. ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಯತ್ನಾಳ್​ರನ್ನು ಪಕ್ಷದಿಂದ ಹೊರ ಹಾಕುವಂತೆ ನಾನು ಪಕ್ಷದ ಅಧ್ಯಕ್ಷರಿಗೆ ಮನವಿ ಮಾಡುತ್ತೇನೆ ಎಂದರು.

ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಯಿಂದ ಕಾಂಗ್ರೆಸ್​ನವರಿಗೆ ಸಂತೋಷವಾಗಿರಬಹುದು. ನಾವು ಬಿಜೆಪಿ ಸರ್ಕಾರ ಬೀಳಿಸುವುದಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ನೀವಲ್ಲ, ಸ್ವರ್ಗದಲ್ಲಿರುವ ಇಂದಿರಾಗಾಂಧಿ ಬಂದರೂ ಬಿಜೆಪಿ ಸರ್ಕಾರವನ್ನು ಬೀಳಿಸೋಕೆ ಆಗೋದಿಲ್ಲ ಎಂದರು.

ಮಳೆಯಿಂದ ಹಾನಿಯಾಗಿರುವ ಕುರಿತು ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸರ್ಕಾರದಲ್ಲಿ ದುಡ್ಡಿನ ಸಮಸ್ಯೆ ಇದ್ದರೂ ನಾವು ತೊಂದರೆಗೊಳಗಾದವರಿಗೆ ಪರಿಹಾರ ನೀಡುವ ವ್ಯವಸ್ಥೆ ಮಾಡುತ್ತೇವೆ. ಸಿದ್ದರಾಮಯ್ಯ ಅವರ ಹೇಳಿಕೆಗೂ, ಅವರ ನಡುವಳಿಕೆಗೂ ಸಂಬಂಧವಿರುವುದಿಲ್ಲ. ಕುರ್ಚಿ ಖಾಲಿಯಾಗುತ್ತೆ ಎಂದು ಕುರ್ಚಿ ಕನಸು ಕಾಣಬೇಡಿ ಎಂದು ಕೆ.ಎಸ್. ಈಶ್ವರಪ್ಪ ಟಾಂಗ್ ನೀಡಿದರು.

ABOUT THE AUTHOR

...view details