ಕೊಪ್ಪಳ :ಇಂದು ರಾತ್ರಿ 9 ಗಂಟೆಗೆ ಎಲ್ಲರೂ ದೀಪ ಬೆಳಗಿಸಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ ಹಿನ್ನೆಲೆಯಲ್ಲಿ ನಗರದಲ್ಲಿ ಜನರು ಹಣತೆಗಳ ಖರೀದಿಯಲ್ಲಿ ತೊಡಗಿದ್ದಾರೆ.
'ಕೊರೊನಾ' ವಿರುದ್ಧ ಇಡೀ ದೇಶದ ಜನರಿಂದ ಏಕತೆಯ ದೀಪ.. ಹಣತೆ ಖರೀದಿ ಜೋರು - ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕರೆ
ಬೆಳಗ್ಗೆಯಿಂದಲೇ ಜನ ಖರೀದಿಯಲ್ಲಿ ತೊಡಗಿದ್ದು ಮೋದಿ ಕರೆಯಂತೆ ದೀಪ ಬೆಳಗಿಸಲು ಸಜ್ಜಾಗುತ್ತಿದ್ದಾರೆ.
'ಕೊರೊನಾ' ಸುಡಲು ಮುಂದಾದ ಕೊಪ್ಪಳ ಜನ
ನಗರದ ಕುಂಬಾರ ಓಣಿಯಲ್ಲಿ ಹಣತೆಗಳನ್ನು ಖರೀದಿಸುತ್ತಿದ್ದಾರೆ. ಬೆಳಗ್ಗೆಯಿಂದಲೇ ಜನ ಖರೀದಿಯಲ್ಲಿ ತೊಡಗಿದ್ದು ಮೋದಿ ಕರೆಯಂತೆ ದೀಪ ಬೆಳಗಿಸಲು ಸಜ್ಜಾಗುತ್ತಿದ್ದಾರೆ. ಈ ಹಿನ್ನೆಲೆ 40 ರೂ. ಒಂದು ಡಜನ್ (12 ದೀಪ ) ದೊಟ್ಟ ದೀಪ ಹಾಗೂ 30 ರೂ. ಡಜನ್ನಂತೆ ಸಣ್ಣ ದೀಪಗಳನ್ನ ಮಾರಾಟ ಮಾಡುತ್ತಿದ್ದಾರೆ.