ಕರ್ನಾಟಕ

karnataka

By

Published : Dec 1, 2019, 4:44 PM IST

ETV Bharat / state

ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ ಸಾವು ಆರೋಪ

ನಗರದ ಜಿಲ್ಲಾಸ್ಪತ್ರೆಯ್ಲಲಿ ಬಳ್ಳಾರಿ ಮೂಲದ ತುಂಬು ಗರ್ಭಿಣಿ ಸಾವನ್ನಪ್ಪಿದ್ದು, ಘಟನೆಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಮೃತ ಮಹಿಳೆಯ ಸಂಬಂಧಿಕರು ಆರೋಪಿಸಿ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

koppal-pregnant-women-died-in-district-hospital
ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ ಸಾವು ಆರೋಪ

ಕೊಪ್ಪಳ: ತುಂಬು ಗರ್ಭಿಣಿಯೊಬ್ಬಳು ಮೃತಪಟ್ಟ ಘಟನೆ ನಗರದ ಜಿಲ್ಲಾಸ್ಪ್ರತೆಯಲ್ಲಿ ನಡೆದಿದ್ದು,ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂಬ ಆರೋಪ ಕೇಳಿ ಬಂದಿದೆ.

ಬಳ್ಳಾರಿ ಜಿಲ್ಲೆಯ ಕೊಗಳಿತಾಂಡಾದ ಜ್ಯೊತಿಬಾಯಿ ನಾಯ್ಕ (26) ಎಂಬ ಮಹಿಳೆ ಇಂದು ಬೆಳಗ್ಗೆ ಕೊಪ್ಪಳ ಜಿಲ್ಲಾಸ್ಪತ್ರೆಗೆ ಹೆರಿಗಾಗಿ ದಾಖಲಾಗಿದ್ದರು. ದಾಖಲಾಗಿ ಒಂದು ಗಂಟೆಯಾದರೂ ವೈದ್ಯರು ಬಂದು ನೋಡಿಲ್ಲ. ವೈದ್ಯರು ಬರುವ ವೇಳೆಗೆ ಜ್ಯೋತಿಬಾಯಿ ಮೃತಪಟ್ಟಿದ್ದಳು. ಆದರೆ ರಕ್ತದ ಕೊರತೆಯಿಂದ ಮಹಿಳೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಸಂಬಂಧಿಕರಿಗೆ ತಿಳಿಸಿದ್ದಾರಂತೆ.

ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ ಸಾವು ಆರೋಪ

ಆದರೆ, ಮಹಿಳೆ ಮೃತಪಟ್ಟಿರೋದು ವೈದ್ಯರ ನಿರ್ಲಕ್ಷ್ಯದಿಂದ. ಅಲ್ಲದೆ ರಕ್ತ ಪರೀಕ್ಷಾ ವರದಿಯನ್ನು ಸಹ ವೈದ್ಯರು ತಿದ್ದಿದ್ದಾರೆ. ಹಿಮೋಗ್ಲೋಬಿನ್ 11.6 ಇರುವುದನ್ನು 2.6 ಎಂದು ವೈದ್ಯರು ತಿದ್ದಿದ್ದಾರೆ ಎಂದು ಮೃತ ಮಹಿಳೆಯ ಸಂಬಂಧಿಕರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.

ರಕ್ತ ಪರೀಕ್ಷಾ ವರದಿ

For All Latest Updates

TAGGED:

ABOUT THE AUTHOR

...view details