ಕರ್ನಾಟಕ

karnataka

By

Published : Apr 15, 2020, 3:30 PM IST

ETV Bharat / state

2.o ಲಾಕ್​ಡೌನ್​ಗೆ ಡೋಂಟ್ ಕೇರ್ ಎಂದ ಕೊಪ್ಪಳ ಮಂದಿ... ರೋಡಲ್ಲಿ ಬಿಂದಾಸ್​ ಸಂಚಾರ

ಕೊಪ್ಪಳದ ಜವಾಹರ್​ ಲಾಲ್​​ ರಸ್ತೆ ಸೇರಿದಂತೆ ಕೆಲವೆಡೆ ಅನಗತ್ಯವಾಗಿ ಜನರು ಓಡಾಡುತ್ತಿದ್ದು, 2.0 ಲಾಕ್​ಡೌನ್​ಗೆ ಕ್ಯಾರೇ ಎನ್ನುತ್ತಿಲ್ಲ.

ಲಾಕ್​ಡೌನ್​ಗೆ ಕ್ಯಾರೆ ಎನ್ನದ ಜನ
ಲಾಕ್​ಡೌನ್​ಗೆ ಕ್ಯಾರೆ ಎನ್ನದ ಜನ

ಕೊಪ್ಪಳ: ಕೊರೊನಾ ನಿಯಂತ್ರಿಸುವ ಉದ್ದೇಶದಿಂದ ಎರಡನೇ ಹಂತದಲ್ಲಿ ಲಾಕ್ ಡೌನ್ ಮುಂದುವರಿಸಲಾಗಿದ್ದರೂ ಕೂಡ ನಗರದಲ್ಲಿ ಜನರು ಮಾತ್ರ ಬೇಜವಾಬ್ದಾರಿತನ ಪ್ರದರ್ಶಿಸುತ್ತಿದ್ದಾರೆ.

ಲಾಕ್​ಡೌನ್​ಗೆ ಕ್ಯಾರೇ ಎನ್ನದೇ ಬಿಂದಾಸ್​ ಸಂಚಾರ

ನಗರದಲ್ಲಿ ಅನವಶ್ಯಕವಾಗಿ ಜನರು ವಾಹನಗಳಲ್ಲಿ ತಿರುಗಾಡುತ್ತಿದ್ದಾರೆ. ಜೊತೆಗೆ ಜವಾಹರ ಲಾಲ್​​ ರಸ್ತೆ ಸೇರಿದಂತೆ ಕೆಲವೆಡೆ ಅಗತ್ಯ ವಸ್ತುಗಳ ಅಂಗಡಿಗಳು ಸೇರಿದಂತೆ ವಿವಿಧ ಅಂಗಡಿಗಳು ತೆರೆದಿರೋದು ಕಂಡು ಬರುತ್ತಿದೆ. ಇನ್ನು ಬ್ಯಾಂಕ್​ಗಳ ಮುಂದೆ‌ ಜನರು ಜಮಾಯಿಸುವುದು ಸಾಮಾನ್ಯವಾಗಿದೆ. ಅನಗತ್ಯವಾಗಿ ಓಡಾಡುವ ಜನರನ್ನು ನಿಯಂತ್ರಿಸಲು ಪೊಲೀಸರು ದಂಡ ಸೇರಿದಂತೆ ನಾನಾ ಕಸರತ್ತು ನಡೆಸುತ್ತಿದ್ದರೂ ಕೂಡ ಜನ ಸಾಮಾನ್ಯರು ಮಾತ್ರ ಬಗ್ಗುತ್ತಿಲ್ಲ.

ABOUT THE AUTHOR

...view details