ಕರ್ನಾಟಕ

karnataka

By

Published : Aug 28, 2020, 3:49 PM IST

ETV Bharat / state

ಕೊಪ್ಪಳದ ಬಿಜೆಪಿ ಯುವ ಮುಖಂಡ ಕೊರೊನಾ ಸೋಂಕಿಗೆ ಬಲಿ

ಕೊಪ್ಪಳದ ಬಿಜೆಪಿಯ ಯುವ ಮುಖಂಡ ಹಾಲೇಶ್ ಕಂದಾರಿ ಅವರು ಕೊರೊನಾ ವೈರಸ್‌ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

Covid died
Covid died

ಕೊಪ್ಪಳ:ನಗರದ ಬಿಜೆಪಿ ಯುವ ಮುಖಂಡ‌ ಹಾಲೇಶ್ ಕಂದಾರಿ ಅವರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಆಗಸ್ಟ್ 25 ರಂದು ಇವರಿಗೆ ಕೊರೊನಾ ಸೋಂಕು ತಗುಲಿತ್ತು. ಈ ಹಿನ್ನೆಲೆಯಲ್ಲಿ ನಗರದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಹೆಚ್ಚಿನ ಚಿಕಿತ್ಸೆಗೆ ನಿನ್ನೆ ಮಧ್ಯಾಹ್ನ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.

ಹಾಲೇಶ್ ಕಂದಾರಿ ಅವರು ಹೋರಾಟಗಳ ಮೂಲಕ ಹಂತ ಹಂತವಾಗಿ ಬೆಳೆದು ಬಂದು ಬಿಜೆಪಿಯಲ್ಲಿ ಯುವನಾಯಕರಾಗಿ ಗುರುತಿಸಿಕೊಂಡಿದ್ದರು. ಇವರ ನಿಧನಕ್ಕೆ ಅನೇಕರು ಕಂಬನಿ ಮಿಡಿದಿದ್ದಾರೆ.

ABOUT THE AUTHOR

...view details