ಕರ್ನಾಟಕ

karnataka

ETV Bharat / state

ಕೃಷಿ ಸಂಜೀವಿನಿ ಹೆಸರಿನ ಕೃಷಿ ವಾಹನಗಳಿಗೆ ಚಾಲನೆ ನೀಡಿದ ಮುಖ್ಯಮಂತ್ರಿ - karnataka chief minister BS Yadiyurappa to launch krishi sanjeevini

ಸಸ್ಯ, ಬೆಳೆ ಹಾಗೂ ಮಣ್ಣು ಪರೀಕ್ಷೆಯ ಸೌಲಭ್ಯ ನೀಡಲಿರುವ ಕೃಷಿ ಸಂಜೀವಿನಿಯ 20 ವಾಹನಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೊಪ್ಪಳದಲ್ಲಿ ಚಾಲನೆ ನೀಡಿದರು.

Krushi sanjeevini vehicle
ಕೃಷಿ ಸಂಜೀವಿನಿ ವಾಹನ

By

Published : Jan 9, 2021, 3:19 PM IST

ಕೊಪ್ಪಳ: ನೇರವಾಗಿ ರೈತರ ಜಮೀನಿಗೆ ತೆರಳಿ ಸಸ್ಯ, ಬೆಳೆ ಹಾಗೂ ಮಣ್ಣು ಪರೀಕ್ಷೆಯ ಸೌಲಭ್ಯ ನೀಡಲಿರುವ ಕೃಷಿ ಸಂಜೀವಿನಿಯ 20 ಸಂಚಾರಿ ವಾಹನಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಸಿರು‌ ನಿಶಾನೆ ತೋರಿಸಿದರು.

ಸ್ವಾಭಿಮಾನಿ ರೈತ ಕಾರ್ಡ್ ವಿತರಣೆ

ಜಿಲ್ಲೆಯ ಭಾನಾಪುರ ಬಳಿ ಏಕಸ್ ಸಂಸ್ಥೆಯ ಆಟಿಕೆ ವಸ್ತುಗಳ ತಯಾರಿಕಾ ಘಟಕದ ಭೂಮಿ ‌ಪೂಜೆಗೂ ಮುನ್ನ ಕೃಷಿ ಸಂಜೀವಿನಿ ಸಂಚಾರಿ ವಾಹನಗಳಿಗೆ ಚಾಲನೆ ನೀಡಿದರು. ಅಲ್ಲದೇ, ಜಿಲ್ಲೆಯ ಒಟ್ಟು 1.5 ಲಕ್ಷ ರೈತರಿಗೆ ಸ್ವಾಭಿಮಾನಿ ರೈತ ಕಾರ್ಡ್ ವಿತರಣೆಯಾಗಲಿದೆ. ಸಾಂಕೇತಿಕವಾಗಿ ರೈತರಿಗೆಸ್ವಾಭಿಮಾನಿ ರೈತಕಾರ್ಡ್ ವಿತರಿಸಿದರು.

ಕೃಷಿ ವಾಹನಗಳಿಗೆ ಚಾಲನೆ ನೀಡಿದ ಮುಖ್ಯಮಂತ್ರಿ

ರಾಜ್ಯದಲ್ಲೇ ಮೊದಲು ಕೊಪ್ಪಳ ಜಿಲ್ಲೆಗೆ ರೈತ ಸಂಜೀವಿನಿ ವಾಹನಗಳು ಬಂದಿವೆ. ರೈತರಿಗೆ ಅನುಕೂಲವಾಗಲಿವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್​ ಹೇಳಿದರು.

ABOUT THE AUTHOR

...view details