ಕರ್ನಾಟಕ

karnataka

By

Published : Jun 5, 2020, 11:31 PM IST

ETV Bharat / state

ಕಾರ ಹುಣ್ಣಿಮೆ ಕರಿ ಹರಿಯುವ ಸ್ಪರ್ಧೆಗೆ ಸಾಂಕೇತಿಕ ಚಾಲನೆ

ಕೊರೊನಾ ಇರುವುದರಿಂದ ಕುಷ್ಟಗಿಯಲ್ಲಿ ಅದ್ಧೂರಿಯಾಗಿ ನಡೆಯಬೇಕಿದ್ದ ಕಾರ ಹುಣ್ಣಿಮೆಯನ್ನು ಸಾಂಕೇತಿಕವಾಗಿ ಆಚರಿಸಲಾಯಿತು.

kara hunnime celebration in koppal
ಕಾರ ಹುಣ್ಣಿಮೆ ಕರಿ ಹರಿಯುವ ಸ್ಪರ್ಧೆಗೆ ಸಾಂಕೇತಿಕ ಚಾಲನೆ

ಕುಷ್ಟಗಿ :ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಜನ ಗುಂಪು ಸೇರಬಾರದು ಎನ್ನುವ ನಿರ್ಬಂಧದ ಹಿನ್ನೆಲೆಯಲ್ಲಿ ರೈತರ ಕಾರು ಹುಣ್ಣಿಮೆಯ ಕರಿ ಹರಿಯುವ ಸ್ಪರ್ಧೆಯನ್ನು ಸಾಂಕೇತಿಕವಾಗಿ ಆಚರಿಸಲಾಯಿತು.

ಶುಕ್ರವಾರ ಸಂಜೆ ಕಾರ ಹುಣ್ಣಿಮೆ ಕರಿ ಹರಿಯುವ ಸಂಪ್ರದಾಯಿಕ ಸ್ಪರ್ಧೆ ಸಾಂಕೇತಿಕವಾಗಿ ನೆರವೇರಿತು. ಈ ಮೊದಲು ನಾಯಕವಾಡಿ ಓಣಿಯಲ್ಲಿ ಈ ಸಂಪ್ರದಾಯಿಕ ಸ್ಪರ್ಧೆ ನಡೆಸಲಾಯಿತು.

ಕಾರ ಹುಣ್ಣಿಮೆ ಕರಿ ಹರಿಯುವ ಸ್ಪರ್ಧೆಗೆ ಸಾಂಕೇತಿಕ ಚಾಲನೆ

ಕೇವಲ ಕೆಲವು ರೈತರ ಎತ್ತುಗಳಿಂದ ಕಾರ ಹುಣ್ಣಿಮೆ ಕರಿ ಹರಿಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಇಲ್ಲಿನ ಕಟ್ಟಿ ದುರಗಮ್ಮ ದೇವಿ ದೇವಸ್ಥಾನದ ಪಾದಗಟ್ಟೆಯಿಂದ ದೇವಿ ಸನ್ನಿಧಿಯವರೆಗೂ ಏಳೆಂಟು ಎತ್ತುಗಳ ಕರಿ ಸ್ಪರ್ಧೆಯಲ್ಲಿ ಭಾಗಿಯಾಗಿದ್ದವು.

ABOUT THE AUTHOR

...view details